ಆಪ್ ಸೇರಿದ ಜಾರ್ಖಂಡ್ ಕಾಂಗ್ರೆಸ್ ವರಿಷ್ಠ ಅಜಯ್ ಕುಮಾರ್

Update: 2019-09-19 16:05 GMT

 ಹೊಸದಿಲ್ಲಿ, ಸೆ. 19: ಜಾರ್ಖಂಡ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಅಜಯ್ ಕುಮಾರ್ ಗುರುವಾರ ದಿಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಉಪಸ್ಥಿತಿಯಲ್ಲಿ ಅಮ್ ಆದ್ಮಿ ಪಕ್ಷ (ಆಪ್) ಸೇರಿದರು.

ಈ ವರ್ಷಾಂತ್ಯದಲ್ಲಿ ಜಾರ್ಖಂಡ್ ವಿಧಾನ ಸಭೆ ಚುನಾವಣೆ ನಡೆಯಲಿದ್ದು, ಅದಕ್ಕಿಂತ ಮುನ್ನ ಅಜಯ್ ಕುಮಾರ್ ಕಾಂಗ್ರೆಸ್ ತ್ಯಜಿಸಿ ಆಪ್ ಸೇರಿರುವುದು ಕಾಂಗ್ರೆಸ್‌ಗೆ ಭಾರೀ ಹಿನ್ನಡೆ ಉಂಟು ಮಾಡಿದೆ. ‘‘ನಮ್ಮಂತಹ ಎಲ್ಲ ಸಾಮಾನ್ಯ ಮನುಷ್ಯರು ಮುಂದೆ ಬರಬೇಕು ಹಾಗೂ ಪ್ರಾಮಾಣಿಕ ರಾಜಕೀಯಕ್ಕೆ ಸಹಕರಿಸಬೇಕು. ಇಂದಿನ ರಾಜಕೀಯಕ್ಕೆ ಏಕೈಕ ಉತ್ತರ ಆಮ್ ಆದ್ಮಿ ಪಕ್ಷ’’ ಎಂದು ಆಪ್ ಟ್ವೀಟ್ ಮಾಡಿದೆ. 2019ರ ಲೋಕಸಭಾ ಚುನಾವಣೆಯ ಸೋಲಿನ ನೈತಿಕ ಹೊಣೆ ಹೊತ್ತು ಅಜಯ್ ಕುಮಾರ್ ಕಾಂಗ್ರೆಸ್‌ಗೆ ಇತ್ತೀಚೆಗೆ ರಾಜೀನಾಮೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News