ಪಾಣೆಮಂಗಳೂರು: ಅಲ್ ಬದ್ರಿಯಾ ಮದ್ರಸದಲ್ಲಿ ಮುಅಲ್ಲಿಂ ಡೇ ಆಚರಣೆ

Update: 2019-09-21 04:31 GMT

ಬಂಟ್ವಾಳ, ಸೆ.21: ಪಾಣೆಮಂಗಳೂರು ನೆಹರೂ ನಗರದ ಅಲ್ ಬದ್ರಿಯಾ ಮದ್ರಸದಲ್ಲಿ ಇತ್ತೀಚೆಗೆ ಮುಅಲ್ಲಿಂ ಡೇ ಆಚರಿಸಲಾಯಿತು.

ಖತೀಬ್ ಅಬ್ದುಲ್ ರಹ್ಮಾನ್ ಫೈಝಿ ಉದ್ಘಾಟಿಸಿದರು ಸದರ್ ಉಸ್ತಾದ್ ಖಾಲಿದ್ ಮುಸ್ಲಿಯಾರ್ ಮುಅಲ್ಲಿಂ ಡೇ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಮಾಅತ್ ಕಾರ್ಯದರ್ಶಿ ಅಬ್ದುಲ್ ಸಲಿಂ, ಮುಅಲ್ಲಿಂಗಳಾದ ಅಬ್ದುಲ್ ಮಜೀದ್ ಮುಸ್ಲಿಯಾರ್, ಅಬ್ದುಲ್ಲಾ ಮುಸ್ಲಿಯಾರ್, ಇಕ್ಬಾಲ್ ದಾರಿಮಿ, ಸ್ಥಳೀಯ ಎಸ್ಕೆಎಸ್ಸೆಸ್ಸೆಫ್ ಕಾರ್ಯಕರ್ತರು ಹಾಗೂ ಮದ್ರಸ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಇಬ್ರಾಹೀ ಝೈನಿ ಕೊಡಂಗಾಯಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News