ನುಳ್ಳಿಪ್ಪಾಡಿ: ಆಸ್ಪತ್ರೆಗೆ ನುಗ್ಗಿ ತಂಡದಿಂದ ದಾಂಧಲೆ

Update: 2019-09-23 04:31 GMT

ಕಾಸರಗೋಡು, ಸೆ.23:  ತಂಡವೊಂದು ಖಾಸಗಿ ಆಸ್ಪತ್ರೆಗೆ ನುಗ್ಗಿ ದಾಂಧಲೆ ನಡೆಸಿದ ಘಟನೆ ರವಿವಾರ ರಾತ್ರಿ ನಗರ ಹೊರವಲಯದ ನುಳ್ಳಿಪ್ಪಾಡಿ ಎಂಬಲ್ಲಿ ನಡೆದಿದೆ.

ತಂಡವು ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿದ್ದು, ರೋಗಿಗಳು, ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದೆ. ಗಾಜು, ಪೀಠೋಪಕರಣ ಹಾಗೂ ಇತರ ವಸ್ತುಗಳಿಗೆ ಹಾನಿ ಎಸಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಪ್ರಕರಣವೊಂದರ ಆರೋಪಿ ನೇತೃತ್ವದಲ್ಲಿ ಈ ಕೃತ್ಯ ನಡೆದಿದೆ ಎನ್ನಲಾಗಿದೆ.  ಬೈಕ್ ಅಪಘಾತ ವೊಂದರಲ್ಲಿ  ಗಾಯಗೊಂಡ ಇಬ್ಬರನ್ನು ಈ ಆಸ್ಪತ್ರೆಗೆ ತರಲಾಗಿತ್ತು . ಇವರ ಜೊತೆ ಬಂದ ತಂಡ ಈ ಕೃತ್ಯ ಎಸಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ವೈದ್ಯರ ಕಚೇರಿಯ ಗಾಜುಗಳನ್ನು ಹುಡಿ ಮಾಡಿದ ತಂಡ ಆಸ್ಪತ್ರೆಯುದ್ದಕ್ಕೂ ಕೈಗೆ ಸಿಕ್ಕ ವಸ್ತುಗಳನ್ನು ಎಸೆದು ಹಾನಿಗೊಳಿಸಿತು .

ಘಟನೆ ಸುದ್ದಿ ತಿಳಿದು ನಗರ ಠಾಣಾ ಪೊಲೀಸರು ಆಸ್ಪತ್ರೆಗೆ ತಲಪುವಷ್ಟರಲ್ಲಿ ತಂಡವು ಪರಾರಿಯಾಗಿದೆ. ಸ್ಥಳದಲ್ಲಿ ಜಮಾಯಿಸಿದ್ದ ಗುಂಪನ್ನು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಚದುರಿಸಿದರು.

ದಾಂಧಲೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News