ಎಸ್ಸೆಸ್ಸೆಫ್ ಸುರತ್ಕಲ್: 'ಹಳೆ ಬೇರು ಹೊಸ ಚಿಗುರು' ಕಾರ್ಯಕ್ರಮ

Update: 2019-09-30 10:44 GMT

ಸುರತ್ಕಲ್ :  ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ "ಹಳೆ ಬೇರು ಹೊಸ ಚಿಗುರು" ಕಾರ್ಯಕ್ರಮವು  ಡಿವಿಷನ್ ಅಧ್ಯಕ್ಷ ಉಮರುಲ್ ಫಾರೂಕ್ ಸಖಾಫಿ, ಕಾಟಿಪಳ್ಳ ಅಧ್ಯಕ್ಷತೆಯಲ್ಲಿ  ಕಾಟಿಪಳ್ಳದಲ್ಲಿ ನಡೆಯಿತು.

ಅಸ್ಸಯ್ಯಿದ್ ಹಾಮಿದ್ ತಂಙಳ್ ಅಲ್ ಬುಖಾರಿ ಕಾಟಿಪಳ್ಳ ದುಆಗೈದರು. 

ಮುಹ್ಯಿದ್ದೀನ್ ಜುಮಾ ಮಸ್ಜಿದ್ ಕಾಟಿಪಳ್ಳ ಇದರ ಖತೀಬ್ ವಿ.ಯು ಅಬ್ದುನ್ನಾಸಿರ್ ಮದನಿ ಉದ್ಘಾಟಿಸಿದರು. ಸುನ್ನೀ ಕೋ ಆರ್ಡಿನೇಶನ್ ಕಮಿಟಿ ಕರ್ನಾಟಕ  ಅಧ್ಯಕ್ಷ ಎಸ್.ಪಿ ಹಂಝ ಸಖಾಫಿ , ಬಂಟ್ವಾಳ  ವಿಷಯ ಮಂಡನೆ ನಡೆಸಿ ಸಂಘಟನೆಯ ಗುರಿ,ತತ್ವ,ಮಾರ್ಗಗಳ ಕುರಿತು ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಎಸ್.ಇ.ಡಿ.ಸಿ ಕರ್ನಾಟಕ ಅಧ್ಯಕ್ಷ ಕೆ.ಕೆ ಕಾಮಿಲ್ ಸಖಾಫಿ ಸುರಿಬೈಲ್, ದಕ್ಷಿಣ ಕನ್ನಡ ವಾರ್ತಾಧಿಕಾರಿ  ಅಬ್ಬುಲ್ ಖಾದರ್ ಶಾ, ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಪಿ ಎಂ ಎ ಅಶ್ರಫ್ ಅಂಜದಿ ಪಕ್ಷಿಕೆರೆ ,ಹಾಜಿ ಅಬ್ದುರ್ರಹ್ಮಾನ್  ಪ್ರಿಂಟೆಕ್, ಅಮೀರುದ್ದೀನ್ 3ನೇ ಬ್ಲಾಕ್ ,ಮುಹಮ್ಮದಲಿ ಮುಕ್ಕ, ಹಾಜಿ ಮುಹಮ್ಮದ್ ಆಸಿಫ್  ಕೃಷ್ಣಾಪುರ, ಭಾಗವಹಿಸಿ ಸಂಘಟನೆಯ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಕಾರ್ಯಕ್ರಮದಲ್ಲಿ ಸುರತ್ಕಲ್ ಡಿವಿಷನ್  ಮಾಜಿ ಅಧ್ಯಕ್ಷ ಪಿ.ಎಂ ಹಬೀಬುರ್ರಹ್ಮಾನ್ ಸಖಾಫಿ ಕಾಟಿಪಳ್ಳ, ಹೈದರ್ ಮದನಿ ಸೂರಿಂಜೆ, ಅಬ್ದುಲ್ ಲತೀಫ್ ಸಖಾಫಿ ಕಿನ್ನಿಗೋಳಿ, ದ.ಕ ಜಿಲ್ಲಾ ಸದಸ್ಯ ಆರೀಫ್ ಝಹುರಿ ಮುಕ್ಕ, ದ.ಕ ವೆಸ್ಟ್ ಝೋನ್ ಇದರ ಪ್ರ.ಕಾರ್ಯದರ್ಶಿ ಹೈದರ್ ಅಲಿ 4ನೇ ಬ್ಲಾಕ್, ದ.ಕ ವೆಸ್ಟ ಝೋನ್ ಇದರ ಕಾರ್ಯದರ್ಶಿ ಮನ್ಸೂರ್ ಬಜಾಲ್, ಡಿವಿಷನ್ ಪ್ರ.ಕಾರ್ಯದರ್ಶಿ ರಿಝ್ವಾನ್ ಕೃಷ್ಣಾಪುರ, ಡಿವಿಷನ್ ಉಪಾಧ್ಯಕ್ಷ ಅರ್ಷದ್ ಸಖಾಫಿ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಡಿವಿಷನ್ ನಾಯಕರುಗಳಿಗೆ ಗೌರವ ಪತ್ರ ನೀಡಿ ಸನ್ಮಾನಿಸಲಾಯಿತು. ಸುರತ್ಕಲ್ ಡಿವಿಷನ್ ಕಾರ್ಯದರ್ಶಿ ಮುಹಮ್ಮದ್ ತನ್ಸೀರ್ 4ನೇ ಬ್ಲಾಕ್ ಸ್ವಾಗತಿಸಿ, ಕೋಶಾಧಿಕಾರಿ ರಫೀಕ್ 3ನೇ ಬ್ಲಾಕ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News