ಮರಳುಗಾರಿಕೆ ಆರಂಭಿಸುವಂತೆ ಆಗ್ರಹಿಸಿ ಮನವಿ

Update: 2019-09-30 14:28 GMT

ಸಿದ್ದಾಪುರ, ಸೆ.30: ಅಂಪಾರು ಗ್ರಾಮದ ಸಮುದಾಯ ಭವನದಲ್ಲಿ ಇಂದು ನಡೆದ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಅವರ ಜನಸ್ಪಂದನ ಸಭೆಯಲ್ಲಿ ಅಂಪಾರು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ವತಿಯಿಂದ ಬೈಂದೂರು ಮತ್ತು ಕುಂದಾಪುರ ಹೊಳೆಗಳಲ್ಲಿ ಮರಳುಗಾರಿಕೆಗೆ ಅವಕಾಶ ನೀಡಲು ಸರಕಾರ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸ ಲಾಯಿತು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಸರಕಾರಕ್ಕೆ ಈ ಕುರಿತು ಈಗಾಗಲೇ ಪತ್ರ ಬರೆಯಲಾಗಿದ್ದು, ಅ.15ರೊಳಗೆ ಮರಳುಗಾರಿಕೆಗೆ ಆರಂಭಿಸಲಾ ಗುವುದು ಎಂದು ಆಶ್ವಾಸನೆ ನೀಡಿದರು. ಈ ಸಂದರ್ಭ ಕಟ್ಟಡ ಕಾರ್ಮಿಕರಾದ ಚಂದ್ರ ಕುಲಾಲ್ ಮೂಡುಬಗೆ, ಚಂದ್ರ ಪೂಜಾರಿ ನೆಲ್ಲಿಕಟ್ಟೆ, ಲಕ್ಷ್ಮಣ ಶೆಟ್ಟಿ, ಅಜಿತ್ ಕುಲಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News