ಹಸಿವೆ ತಾಳಲಾರದೆ 8 ವರ್ಷದ ಬಾಲಕ ಮೃತ್ಯು: ಕುಟುಂಬಸ್ಥರ ಆರೋಪ

Update: 2019-10-01 17:25 GMT

ಹಸಿವೆ ತಾಳಲಾರದೆ 8 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಈ ಕುಟುಂಬದ ಇತರ 5 ಸದಸ್ಯರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯಲ್ಲಿ ಘಟನೆ ನಡೆದಿದೆ.

ನಾವು ಕೆಲದಿನಗಳಿಂದ ಏನನ್ನೂ ತಿಂದಿಲ್ಲ. ಪಡಿತರ ಖರೀದಿಸಲು ಪಡಿತರ ಚೀಟಿಯೂ ಕುಟುಂಬದ ಬಳಿ ಇಲ್ಲ. ಕೆಲವೊಮ್ಮೆ ಗ್ರಾಮಸ್ಥರು ಏನನ್ನಾದರೂ ನೀಡಿ ಸಹಾಯ ಮಾಡುತ್ತಿದ್ದರು ಎಂದು ಕುಟುಂಬಸ್ಥರೊಬ್ಬರು ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಮರಣೋತ್ತರ ವರದಿ ಬಂದ ಬಳಿಕ ಸಾವಿಗೆ ಏನು ಕಾರಣ ಎನ್ನುವುದು ತಿಳಿದು ಬರಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಅವರು ದಿನಗೂಲಿ ಕಾರ್ಮಿಕರು. ಅವರಿಗೆ ಸರಕಾರದಿಂದ ಯಾವುದೇ ಸೌಲಭ್ಯಗಳು ಸಿಗುತ್ತಿರಲಿಲ್ಲ” ಎಂದು ಸಂಬಂಧಿಕರಲ್ಲೋರ್ವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News