ಕಾಸರಗೋಡು : ರೈಲ್ವೆ ಹಳಿ ಸೇತುವೆಯಿಂದ ನದಿಗೆ ಬಿದ್ದ ವ್ಯಕ್ತಿ ಮೃತ್ಯು

Update: 2019-10-08 07:41 GMT

ಕಾಸರಗೋಡು : ರೈಲ್ವೆ ಹಳಿ ಸೇತುವೆಯಿಂದ ನದಿಗೆ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಕುಂಬಳೆ ಶಿರಿಯದಲ್ಲಿ ನಡೆದಿದೆ.

ಬೇಡಡ್ಕದ ಅನಂತ (40) ಮೃತಪಟ್ಟವರು. ಸಂಬಂಧಿಕರ ಜೊತೆ ಶಿರಿಯ ಸೇತುವೆ ಮೇಲೆ ಕುಳಿತ್ತಿದ್ದಾಗ ಸಂದರ್ಭ ಆಕಸ್ಮಿಕವಾಗಿ ನದಿಗೆ ಬಿದ್ದು ಈ  ಅವಘಡ ನಡೆದಿದೆ.

ಬಳಿಕ ಅಗ್ನಿಶಾಮಕ ದಳ , ಪೊಲೀಸರು ನಡೆಸಿದ ಶೋಧದಿಂದ  ಮೃತದೇಹವನ್ನು ಮೇಲಕ್ಕೆತ್ತಲಾಯಿತು. ಜೊತೆಗಿದ್ದವರಿಂದ ಕುಂಬಳೆ  ಪೊಲೀಸರು ಮಾಹಿತಿ  ಕಲೆ ಹಾಕಿದ್ದಾರೆ .

ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ  ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಬಿಟ್ಟುಕೊಡಲಾಗಿದೆ.
  
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News