ಬಾವಿಗೆ ಹಾರಿ ಆತ್ಮಹತ್ಯೆ

Update: 2019-10-08 15:26 GMT

ಹೆಬ್ರಿ, ಅ.8: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ವರಂಗ ಗ್ರಾಮದ ಬಲ್ಕೋಡಿ ನಿವಾಸಿ ಸಾಧು ಪೂಜಾರಿ(59) ಎಂಬವರು ಮೃತದೇಹ ಮನೆ ಸಮೀಪದ ಬಾವಿಯಲ್ಲಿ ಅ.8ರಂದು ಬೆಳಗ್ಗೆ 8ಗಂಟೆಗೆ ಪತ್ತೆಯಾಗಿದೆ.

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಅವರು ಅ.6ರಂದು ಮನೆಯಿಂದ ಪೇಟೆಗೆ ಹೋದವರು ನಾಪತ್ತೆಯಾಗಿದ್ದು, ಇದೇ ವೇಳೆ ಅವರು ಮನೆ ಬಳಿಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರೆಂದು ತಿಳಿದುಬಂದಿದೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News