ಉಪ್ಪಳದಲ್ಲಿ ಯುವಕನಿಗೆ ಚೂರಿ ಇರಿತ: ಆಸ್ಪತ್ರೆಗೆ ದಾಖಲು
Update: 2019-10-10 07:00 GMT
ಮಂಜೇಶ್ವರ, ಅ.10: ಸೈನ್ಯದ ತರಬೇತಿಗಾಗಿ ಜಾಗಿಂಗ್ ಮಾಡುತ್ತಿದ್ದ ಯುವಕನ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿರುವ ಘಟನೆ ಉಪ್ಪಳದಲ್ಲಿ ನಡೆದಿದೆ.
ಉಪ್ಪಳ ಸಮೀಪದ ಪತ್ವಾಡಿಯ ಜಯರಾಮ್ ಭಂಡಾರಿ ಎಂಬವರ ಪುತ್ರ ಪ್ರಣಾಮ್ ಶೆಟ್ಟಿ (26) ಎಂಬಾತ ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಯುವಕ ಎಂದು ಗುರುತಿಸಲಾಗಿದೆ.
ಇಂದು ಬೆಳಗಿನ ಜಾವ ಜಾಗಿಂಗ್ ಗೆ ಹೋದ ಸಂದರ್ಭ ಪ್ರಣಾಮ್ ಶೆಟ್ಟಿ ಮೇಲೆ ಬೈಕ್ ನಲ್ಲಿ ಬಂದ ಮೂವರ ತಂಡ ಹಲ್ಲೆ ನಡೆಸಿ ಪರಾರಿಯಾಗಿದೆ ಎನ್ನಲಾಗಿದೆ. ಗಾಯಗೊಂಡ ಪ್ರಣಾಮ್ ಶೆಟ್ಟಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ರಾತ್ರಿ ಮೀಯಪದವಿನಲ್ಲಿ ಬೈಕ್ ನಲ್ಲಿ ತಲುಪಿದ ಮೂವರ ತಂಡ ಫೈಸಲ್ ಎಂಬಾತನನ್ನು ಇರಿದು ಗಂಭೀರ ಗಾಯಗೊಳಿಸಿತ್ತು.