ಮರಣಪತ್ರ ಬರೆದಿಟ್ಟು ವಿದ್ಯಾರ್ಥಿನಿ ನಾಪತ್ತೆ

Update: 2019-10-10 15:58 GMT

ಬ್ರಹ್ಮಾವರ, ಅ.10: ಅನಾರೋಗ್ಯದಿಂದ ಬಳಲುತ್ತಿದ್ದ ವಿದ್ಯಾರ್ಥಿನಿ ಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮರಣ ಪತ್ರ ಬರೆದಿಟ್ಟು ನಾಪತ್ತೆ ಯಾಗಿರುವ ಘಟನೆ ಹೇರಾಡಿ ಗ್ರಾಮದ ರಂಗನಕೆರೆ ಎಂಬಲ್ಲಿ ನಡೆದಿದೆ.

ಬಾರಕೂರು ರುಕ್ಷಿಣಿ ಶೆಡ್ತಿ ಕಾಲೇಜಿನ ದ್ವೀತಿಯ ಬಿ.ಕಾಂ. ವಿದ್ಯಾರ್ಥಿನಿ, ರಂಗನಕೆರೆಯ ಸುನೀತಾ ಎಂಬವರ ಮಗಳು ರಕ್ಷಿತಾ(19) ಎಂಬವರು ಅನಾರೋಗ್ಯದಿಂದ ಬಳಲುತ್ತಿದ್ದು, ಅ.9ರಂದು ಬೆಳಗ್ಗೆ ‘ನನ್ನ ಆರೋಗ್ಯ ಸರಿ ಇಲ್ಲದ ಕಾರಣ ಬದುಕಲು ಇಷ್ಟವಿಲ್ಲ, ಆತ್ಮಹತ್ಯೆ ಮಾಡಿ ಕೊಳ್ಳುತ್ತಿದ್ದೇನೆ’ ಎಂದು ಮರಣ ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News