ಅ.13 : ಸುನ್ನಿ ಮಹಲ್ ಫೆಡರೇಶನ್ ಬಂಟ್ವಾಳ ತಾಲೂಕು ಘಟಕದ ರಚನಾ ಸಭೆ

Update: 2019-10-10 16:15 GMT

ವಿಟ್ಲ : ಸಮಸ್ತ ಕೇರಳ ಜಮೀಯತುಲ್ ಉಲಮಾ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸುನ್ನಿ ಮಹಲ್ ಫೆಡರೇಶನ್ (ಎಸ್.ಎಂ.ಎಫ್) ಬಂಟ್ವಾಳ ತಾಲೂಕು ಘಟಕದ ರಚನಾ ಸಭೆಯು ಅ.13ರ ಸಂಜೆ 4 ಕ್ಕೆ ಪಾಣೆಮಂಗಳೂರಿನ ಸಾಗರ್  ಅಡಿಟೋರಿಯಂನಲ್ಲಿ  ನಡೆಯಲಿದೆ. 

ಎಸ್‌.ಎಂ.ಎಫ್. ದ.ಕ.ಜಿಲ್ಲಾ ಅಧ್ಯಕ್ಷ ಶೈಖುನಾ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಉಸ್ತಾದ್ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಈ ಸಭೆಗೆ ಬಂಟ್ವಾಳ ತಾಲೂಕಿನ ಎಲ್ಲಾ ಮಸೀದಿಯ ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಜಿ, ಹಾಗೂ ಖತೀಬರು ತಪ್ಪದೇ ಕ್ಲಪ್ತ ಸಮಯಕ್ಕೆ ಹಾಜರಾಗುವಂತೆ ಫೆಡರೇಶನ್ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News