ವಿಜಯ ಹಝಾರೆ ಟ್ರೋಫಿ: ಕರ್ನಾಟಕಕ್ಕೆ ಸುಲಭ ಜಯ

Update: 2019-10-12 18:24 GMT

ಬೆಂಗಳೂರು, ಅ.12: ಕರ್ನಾಟಕ ತಂಡ ಸೌರಾಷ್ಟ್ರ ವಿರುದ್ಧದ ವಿಜಯ ಹಝಾರೆ ಟ್ರೋಫಿಯ ಎ ಗುಂಪಿನ ಪಂದ್ಯದಲ್ಲಿ 8 ವಿಕೆಟ್‌ಗಳ ಅಂತರದ ಸುಲಭ ಜಯ ದಾಖಲಿಸಿತು.

ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 213 ರನ್ ಗುರಿ ಪಡೆದ ಕರ್ನಾಟಕ ಆರಂಭಿಕ ಆಟಗಾರ ದೇವದತ್ತ ಪಡಿಕ್ಕಲ್ ಶತಕ(ಔಟಾಗದೆ 103, 104 ಎಸೆತ, 13 ಬೌಂ.1 ಸಿ.)ಹಾಗೂ ನಾಯಕ ಮನೀಷ್ ಪಾಂಡೆ ಅರ್ಧಶತಕ(ಔಟಾಗದೆ 67, 53 ಎಸೆತ, 7 ಬೌಂ. 2 ಸಿ.)ಸಹಾಯದಿಂದ 36.4 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ ಗೆಲುವಿನ ದಡ ಸೇರಿತು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಸೌರಾಷ್ಟ್ರ 47.2 ಓವರ್‌ಗಳಲ್ಲಿ 212 ರನ್‌ಗೆ ಆಲೌಟಾಯಿತು. ಕೆಳ ಕ್ರಮಾಂಕದಲ್ಲಿ ಮಂಕಡ್(86)ಹಾಗೂ ಜಿಎಸ್ ಜಾನಿ(66)ಅರ್ಧಶತಕ ಸಿಡಿಸಿ ತಂಡವನ್ನು ಆಧರಿಸಿದರು.ಕರ್ನಾಟಕದ ಪರ ಪ್ರಸಿದ್ಧ ಕೃಷ್ಣ(5-19) ಐದು ವಿಕೆಟ್ ಗೊಂಚಲು ಪಡೆದರೆ, ವಿ.ಕೌಶಿಕ್(3-23)ಮೂರು ವಿಕೆಟ್ ಪಡೆದು ಸೌರಾಷ್ಟ್ರಕ್ಕೆ ಸವಾಲಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News