ಉಡುಪಿ ಮಲಬಾರ್ ಗೋಲ್ಡ್ ನಿಂದ 44 ಮಂದಿಗೆ ವಿದ್ಯಾರ್ಥಿವೇತನ ವಿತರಣೆ

Update: 2019-10-13 07:53 GMT

ಬೈಂದೂರು, ಅ.13: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯ ವತಿಯಿಂದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಯಡ್ತರೆಯ ಬಂಟರ ಸಂಘ ನಾಕಟ್ಟೆ ಪ್ರೇಮ ಜಗನ್ನಾಥ ಶೆಟ್ಟಿ ವೇದಿಕೆಯಲ್ಲಿ ಶನಿವಾರ ನಡೆಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸಾಮಾಜಿಕ ಬದ್ಧತೆ (ಸಿಎಸ್‌ಆರ್) ಚಾರಿ ಟೇಬಲ್ ಅಂಗವಾಗಿ ಬೈಂದೂರು ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 44 ವಿದ್ಯಾರ್ಥಿನಿಯರಿಗೆ ತಲಾ 2500 ರೂ.ನಂತೆ ಒಟ್ಟು 1.10ಲಕ್ಷ ರೂ. ಸಹಾಯಧನವನ್ನು ವಿತರಿಸಲಾಯಿತು.

ಬಂಟರ ಭವನದ ಅಧ್ಯಕ್ಷ ಜಗನ್ನಾಥ್ ಶೆಟ್ಟಿ, ಕೆಎಂಎಫ್ ಉಪಾಧ್ಯಕ್ಷ ಪ್ರಕಾಶ್‌ಚಂದ್ರ ಶೆಟ್ಟಿ, ಜಿಪಂ ಮಾಜಿ ಅಧ್ಯಕ್ಷ ರಾಜು ಪೂಜಾರಿ, ಕುಂದಾಪುರ ತಾಪಂ ಅಧ್ಯಕ್ಷ ಶ್ಯಾಮಲ ಕುಂದರ್, ಸೌಕ್ಯಾ ಸಮೂಹ ಸಂಸ್ಥೆಯ ರಿಯಾಝ್ ಅಹ್ಮದ್, ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ, ಬೈಂದೂರು ಯುವ ಬಂಟರ ಸಂಘದ ಅಧ್ಯಕ್ಷ ವಾಜುರಾಜ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.ಮಲಬಾರ್ ಗೋಲ್ಡ್ ಉಡುಪಿ ಶಾಖಾ ಮುಖ್ಯಸ್ಥ ಹಫೀಝ್ ರಹ್ಮಾನ್, ರಾಘವೇಂದ್ರ ನಾಯಕ್, ಮುಸ್ತಫಾ, ತಂಝೀಮ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News