ಉಳ್ಳೂರು: ಸಿಡಿಲು ಬಡಿದು ಹಲವು ಮನೆಗಳಿಗೆ ಹಾನಿ

Update: 2019-10-13 12:20 GMT

ಕುಂದಾಪುರ, ಅ.13: ಕುಂದಾಪುರ ತಾಲೂಕಿನ ಉಳ್ಳೂರು ಗ್ರಾಮದಲ್ಲಿ ಅ.12ರಂದು ರಾತ್ರಿ ವೇಳೆ ಸಿಡಿಲು ಬಡಿದ ಪರಿಣಾಮ ಹಲವು ಮನೆಗಳಿಗೆ ಹಾನಿ ಅಪಾರ ನಷ್ಟ ಸಂಭವಿಸಿರುವ ಬಗ್ಗೆ ವರದಿಯಾಗಿದೆ.

ಉಳ್ಳೂರು ಗ್ರಾಮದ ಭುಜಂಗ ಕುಲಾಲ ಎಂಬವರ ವಾಸ್ತವ್ಯದ ಮನೆ ಸಿಡಿಲು ಬಡಿದು ಭಾಗಶಃ ಹಾನಿಯಾಗಿದ್ದು, ಸುಮಾರು 25ಸಾವಿರ ರೂ. ನಷ್ಟ ಉಂಟಾಗಿದೆ. ಅದೇ ರೀತಿ ಅದೇ ಗ್ರಾಮದ ದೇವೇಂದ್ರ ನಾಯ್ಕ ಮತ್ತು ಬಸವ ಬಳೆಗಾರ ಎಂಬವರ ಮನೆಗೆ ಹಾನಿಯಾಗಿ ತಲಾ 18ಸಾವಿರ ರೂ. ನಷ್ಟ ಸಂಭವಿಸಿದೆ.

ಅಲ್ಲದೆ ಸುಬ್ಬ ಮೊಗವೀರ ಹಾಗೂ ಲಕ್ಷ್ಮೀ ಎಂಬವರ ಮನೆಗಳು ಭಾಗಶಃ ಹಾನಿಯಾಗಿ ತಲಾ 30ಸಾವಿರ ರೂ. ನಷ್ಟ ಉಂಟಾಗಿದೆ. ಅದೇ ರೀತಿ ಬ್ರಹ್ಮಾವರ ತಾಲೂಕು ಹಿಲಿಯಾಣ ಗ್ರಾಮದ ಸೋಮ ಎಂಬವರ ವಾಸ್ತವ್ಯದ ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿಯಾಗಿ ಸುಮಾರು 10ಸಾವಿರ ರೂ. ನಷ್ಟ ಉಂಟಾಗಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News