ಉಚ್ಚಿಲ: ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಕಚೇರಿ ಉದ್ಘಾಟನೆ

Update: 2019-10-14 10:22 GMT

ಪಡುಬಿದ್ರೆ : ಎಸ್ಕೆಎಸ್ಸೆಸ್ಸೆಫ್ ಇದರ ನೂತನ ಜಿಲ್ಲಾ ಕಚೇರಿ ಉಚ್ಚಿಲದ ಬ್ಲೂ ವೇವ್ಸ್ ಕಟ್ಟಡದಲ್ಲಿ ರವಿವಾರ ಅಝ್ಹರ್ ಫೈಝಿ ಬೊಳ್ಳೂರು ಉಸ್ತಾದ್  ಉದ್ಘಾಟಿಸಿದರು.

ಮುಲ್ಕಿ ಕೇಂದ್ರ ಮಸೀದಿಯ ಖತೀಬ್ ಎಸ್.ಬಿ ದಾರಿಮಿ ಮಾತನಾಡಿ,  ಎಸ್ಕೆಎಸ್ಸೆಸ್ಸೆಫ್ ಸಂಘಟನೆ  ಯುವ ಸಮೂಹವನ್ನು ಸಂಘಟಿಸಿ ಸುಂದರ ಸಮಾಜ ನಿರ್ಮಾಣ ಮಾಡುವುದೇ ಕನಸು. ಸಮಸ್ತವನ್ನು ಪರಿಚಯಿಸುವಲ್ಲಿ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಕೆಲಸಗಳು ನಡೆಯುತ್ತಿವೆ. ಇದಕ್ಕೆ ಉಚ್ಚಿಲದಲ್ಲಿ ಉದ್ಘಾಟನೆಗೊಂಡ ಜಿಲ್ಲಾ ಕಚೇರಿ ಸಾಕ್ಷಿಯಾಗಿದೆ ಎಂದು ಎಸ್.ಬಿ .ದಾರಿಮಿ ಮೆಚ್ಚುಗೆ ವ್ಯಕ್ತಪಡಿಸಿದರು.

ಎರ್ಮಾಳು ಜಾಮಿಯಾ ಮಸೀದಿ ಖತೀಬ್ ಶಬ್ಬೀರ್ ಫೈಝಿ, ಎಸ್ಕೆಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಆಸೀಫ್ ಹನ್ನಾನ್ ಉಚ್ಚಿಲ, ಬಾಸ್ಕರ ನಗರ ಅರಬೀ ಜುಮಾ ಮಸೀದಿ  ಅಬ್ದುಲ್ ರಝಾಕ್ ಸಅದಿ,  ಎರ್ಮಾಳು ಜಾಮಿಯಾ ಮಸೀದಿಯ ಮೌಲಾನ ರಝಾ, ಶಂಸುಲ್ ಉಲಮಾ ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಎಂ.ಪಿ. ಮೊಯಿದಿನಬ್ಬ, ತೌಫೀಕ್ ಉಚ್ಚಿಲ, ಶರೀಫ್ ಕರೀಂ ಉಚ್ಚಿಲ, ಅಹಮದ್ ಹಾಜಿ ಉಚ್ಚಿಲ, ಸೂಫಿ ಹೆಜಮಾಡಿ, ಗ್ರಾ.ಪಂ ಸದಸ್ಯರಾದ ರಹೀಂ ಕುಂಜೂರು, ರಝಾಕ್ ಬಗ್ಗತೋಟ, ಚಂದ್ರ ನಗರ ಕ್ರೆಸೆಂಟ್ ಇಂಟರ್ನ್ಯಾಷನಲ್ ಸ್ಕೂಲ್‍ನ  ಮುಖ್ಯಸ್ಥ ಶಂಸುದ್ದೀನ್ ಯೂಸುಫ್, ಎಸ್ಕೆಎಸ್ಸೆಸ್ಸೆಫ್ ಉಚ್ಚಿಲ ಶಾಖೆಯ ಅಧ್ಯಕ್ಷ ಚೆರಿಯಮೋನ್ ಉಚ್ಚಿಲ, ಉಪಸ್ಥಿತರಿದ್ದರು.

ಇಸ್ಮಾಯಿಲ್ ಉಸ್ತಾದ್ ಉಚ್ಚಿಲ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News