ಕಾಪು: ಸಯ್ಯದ್ ಖ್ವಾಜಾ ಪೀರಾನ್ ಎಜುಕೇಶನ್ ಕಮಿಟಿ ಸಭೆ

Update: 2019-10-15 12:09 GMT

ಕಾಪು: ಮಲ್ಲಾರು ಉರ್ದು ಸಂಯಕ್ತ ಪ್ರೌಢಶಾಲೆಯ ಅಭಿವೃದ್ಧಿಗಾಗಿ ಕಾರ್ಯಾಚರಿಸುವ ಸಯ್ಯದ್ ಖ್ವಾಜಾ ಪೀರಾನ್ ಎಜುಕೇಶನ್ ಕಮಿಟಿ ಮಲ್ಲಾರ್ ಇದರ ಮಹಾಸಭೆಯು ಶಬೀಹ್ ಅಹಮದ್ ಖಾಝಿ ಅಧ್ಯಕ್ಷತೆಯಲ್ಲಿ ನಡೆಯಿತು.

ಗತ ಸಾಲಿನ ವರದಿ ನಂತರ ಲೆಕ್ಕ ಪತ್ರ ಮಂಡಿಸಲಾಯಿತು. ಮುಂದಿನ ಸಾಲಿನ ಬೆಳವಣೆಗೆಗಾಗಿ ಸಲಹೆ ಸೂಚನೆಗಳನ್ನು ಸಂಗ್ರಹಿಸಲಾಯಿತು. ದಿಲಾವರ್ ಹುಸೈನ್ ಮಂದಿನ ಸಾಲಿಗೆ ಪದಾಧಿಕಾರಿಗಳ ಆಯ್ಕೆಯ ನೇತೃತ್ವನ್ನು ವಹಿಸಿದ್ದರು.

ಶಬೀಹ್ ಅಹಮದ್ ಖಾಝಿ ಮುಂದಿನ ಸಾಲಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಪುನರಾಯ್ಕೆಗೊಂಡರು. ಉಪಾಧ್ಯಕ್ಷರಾಗಿ ನಸೀರ್ ಅಹಮದ್ ಮತ್ತು ಶಾಬು ಸಾಹೇಬ್, ಕಾರ್ಯದರ್ಶಿಯಾಗಿ ಮಸ್ತಾಕ್‌ ಇಬ್ರಾಹೀಂ, ಕೋಶಾಧಿಕಾರಿಯಾಗಿ ಮುಹಮ್ಮದ್ ಸುಲೈಮಾನ್, ಸಂಘಟನಾ ಕಾರ್ಯದರ್ಶಿ ಬಷೀರ್ ಅಹಮದ್, ಪತ್ರಿಕಾ ಕಾರ್ಯದರ್ಶಿ ಅನ್ವರ್ ಅಲಿ ಕಾಪು ಆಯ್ಕೆಯಾದರು.

ಉಳಿದಂತೆ 13 ಮಂದಿ ಸದಸ್ಯರನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಯಿತು. ಮುಹಮ್ಮದ್ ಇಕ್ಬಾಲ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News