‘ಸತ್ಯವನ್ನು ಹಂಚಿಕೊಳ್ಳಲು’ ಎಕೆ ಆ್ಯಪ್‌ಗೆ ಅರವಿಂದ ಕೇಜ್ರಿವಾಲ್‌ರಿಂದ ಚಾಲನೆ

Update: 2019-10-16 15:16 GMT

ಹೊಸದಿಲ್ಲಿ,ಅ.16: ನಗರದ ಜನರು ಮತ್ತು ಆಪ್ ಸ್ವಯಂಸೇವಕರೊಂದಿಗೆ ಸಂಪರ್ಕದಲ್ಲಿರಲು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬುಧವಾರ ತನ್ನ ಸ್ವಂತ ಮೊಬೈಲ್ ಆ್ಯಪ್‌ಗೆ ಚಾಲನೆ ನೀಡಿದ್ದಾರೆ.

‘ ನಮ್ಮ ವಿರುದ್ಧ ಅಪಪ್ರಚಾರದ ಪ್ರಯತ್ನಗಳು ನಡೆದಾಗ ನಾವು ಈ ಆ್ಯಪ್‌ನ ಮೂಲಕ ಸತ್ಯಸಂಗತಿಯನ್ನು ಶೇರ್ ಮಾಡಿಕೊಳ್ಳುತ್ತೇವೆ ’ಎಂದು ಕೇಜ್ರಿವಾಲ್ ಟ್ವೀಟಿಸಿದ್ದಾರೆ.

 ಅರವಿಂದ ಕೇಜ್ರಿವಾಲ್ ಆ್ಯಪ್ ಅಥವಾ ಎಕೆ ಆ್ಯಪ್ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಲಭ್ಯವಿದ್ದು, ಆಮ್ ಆದ್ಮಿ ಪಾರ್ಟಿಯ ಬೆಳವಣಿಗೆ,ಸಾಧನೆಗಳು ಮತ್ತು ಹೋರಾಟಗಳನ್ನು ತೋರಿಸುತ್ತದೆ. ಅದು ಕೇಜ್ರಿವಾಲ್‌ರ ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಲೈವ್ ಟಿವಿಗೂ ನೇರ ಸಂಪರ್ಕವನ್ನು ಕಲ್ಪಿಸುತ್ತದೆ. ಅದನ್ನು ಗೂಗಲ್ ಪ್ಲೇಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ ಮತ್ತು ಐಫೋನ್ ಆಪರೇಟಿಂಗ್ ಸಿಸ್ಟಮ್‌ನಲ್ಲಿಯೂ ಶೀಘ್ರವೇ ಲಭ್ಯವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News