ಮಂಗಳೂರು: ಟಯರ್ ಅಂಗಡಿಗೆ ಬೆಂಕಿ; ಸಕಾಲದಲ್ಲಿ ಸ್ಥಳೀಯರ ಸಹಾಯದಿಂದ ತಪ್ಪಿದ ದುರಂತ

Update: 2019-10-17 05:18 GMT

ಮಂಗಳೂರು: ಬಂದರ್ ನಲ್ಲಿರುವ ಹಿದಾಯತ್ ಸೆಂಟರ್ ನ ಪಕ್ಕದ ಕೆ.ಸಿ. ಸುರೇಶ್ ಮಾಲಕತ್ವದ ನವಜೀವನ ಟ್ರೇಡರ್ಸ್ ಟಯರ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರ ಸಹಾಯದಿಂದ ಭಾರೀ ದುರಂತ ತಪ್ಪಿದೆ.

ಈ ಬಗ್ಗೆ  ಇರ್ಷಾದ್ ವೇಣೂರ್ ಪಾಂಡೇಶ್ವರ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿ, ಮೆಸ್ಕಾಂನವರಿಗೂ ತಿಳಿಸಿ ಕರೆಂಟ್ ಆಫ್ ಮಾಡಲು ಮನವಿ ಮಾಡಿದರು.

ಸುದ್ದಿ ತಿಳಿದ ಸ್ಥಳೀಯ ಯುವಕರಾದ ಆಸಿಫ್, ಅಮೀರ್ ಕುದ್ರೋಳಿ, ಮುನವ್ವರ್ ಕಂದಕ್, ಕಾಸಿಂ, ಶೌಕತ್ ಅಲಿ ಮತ್ತಿತರರು ಅಂಗಡಿ ತೆರೆದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಸುಮಾರು 12 ಫ್ಲ್ಯಾಟ್ ಇದ್ದ ಈ ಕಾಂಪ್ಲೆಕ್ಸ್ ನಲ್ಲಿ ಭಾರೀ ದುರಂತ ತಪ್ಪಿದೆ.

ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದ್ದು, ಸುಮಾರು 6 ಲಕ್ಷ ರೂ. ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.

ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News