ಎಸ್ಸೆಸ್ಸೆಫ್ ವಿಟ್ಲ ಡಿವಿಷನ್‌: 'ಹಳೆ ಬೇರು ಹೊಸ ಚಿಗುರು' ಕಾರ್ಯಕ್ರಮ

Update: 2019-10-17 13:33 GMT

ವಿಟ್ಲ : ಎಸ್ಸೆಸ್ಸೆಫ್ ವಿಟ್ಲ ಡಿವಿಷನ್‌ ಸಮಿತಿ ಅಧ್ಯಕ್ಷ ಅಬ್ದುರ್ರಹ್ಮಾನ್ ಶರಫಿ ಮೂಡಂಬೈಲ್ ಅಧ್ಯಕ್ಷತೆಯಲ್ಲಿ ವಿಟ್ಲ ಡಿವಿಷನ್‌ ವತಿಯಿಂದ ಹಮ್ಮಿಕೊಂಡ 'ಹಳೆ ಬೇರು ಹೊಸ ಚಿಗುರು' ಕಾರ್ಯಕ್ರಮ ಕೊಲಂಬೆ ಮದರಸ ಹಾಲ್'ನಲ್ಲಿ ನಡೆಯಿತ್ತು.

ಸ್ಥಳೀಯ ಖತೀಬ್ ಖಾಸಿಂ ಸಖಾಫಿ ಅಳಕೆಮಜಲು ಕಾರ್ಯಕ್ರಮ ಉದ್ಘಾಟಿಸಿದರು. ಎಸ್ಎಂಎ ರಾಜ್ಯ ಕಾರ್ಯದರ್ಶಿ ಅಶ್ರಫ್ ಸಖಾಫಿ ಮಾಡಾವು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ನಂತರ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಇಬ್ರಾಹೀಂ ಮುಸ್ಲಿಯಾರ್ ಕೊಡಂಗಾಯಿ, ಕೆ ಎಂ ಅಬ್ದುಲ್ ಹಮೀದ್ ಸಖಾಫಿ ಕೊಡಂಗಾಯಿ, ಎಂಕೆಎಂ ಹನೀಫ್ ಕಾಮಿಲ್ ಸಖಾಫಿ, ಇಸ್ಮಾಯಿಲ್ ಮಾಸ್ಟರ್ ಮಂಗಳಪದವು, ಮುಸ್ತಫಾ ಕೋಡಪದವು, ಯೂನುಸ್ ಇಮ್ದಾದಿ, ಝಿಯಾದ್ ಮಾಸ್ಟರ್ ಬೈರಿಕಟ್ಟೆ, ಇಸ್ಮಾಯಿಲ್ ಮದನಿ ಕೋಡಪದವು ಹಾಗೂ ಇತರರು ತಮ್ಮ ಅನುಭವ ಹಂಚಿಕೊಂಡರು.

ಕೊಲಂಬೆ ಜಮಾಅತ್ ಹಾಗೂ ಕೊಲಂಬೆ ಎಸ್ಸೆಸ್ಸೆಫ್ ಶಾಖಾ ನಾಯಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತ್ತು.

ಪ್ರಸ್ತುತ ಕಾರ್ಯಕ್ರಮದಲ್ಲಿ ಎಸ್ ವೈಎಸ್, ಎಸ್ಸೆಸ್ಸೆಫ್ ಹಾಗೂ ಸಂಘ ಕುಟುಂಬದ ವಿವಿಧ ಘಟಕದ ನಾಯಕರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಮೋಡರೇಟರಾಗಿ ಕೆ ಎಂ ಅಶ್ರಫ್ ಸಖಾಫಿ ಕನ್ಯಾನ ಕಾರ್ಯಕ್ರಮ ನಿರ್ವಹಿಸಿದರು. ಸ್ವಾಗತ ಸಮಿತಿ ಚೆಯರ್ಮೇನ್  ಮೂಸ ಕಲೀಂ ಬೈರಿಕಟ್ಟೆ ಸ್ವಾಗತಿಸಿ,  ಅಬ್ದುರಝಾಕ್ ಪೆಲತ್ತಡ್ಕ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News