ಮಣಿಪಾಲ: ಉಚಿತ ಚಿತ್ರಕಲಾ ಕಾರ್ಯಾಗಾರ

Update: 2019-10-17 14:16 GMT

ಮಣಿಪಾಲ, ಅ.17: 30 ವರ್ಷ ಮೇಲ್ಪಟ್ಟ ಕಲಾಸಕ್ತ ಸಾರ್ವಜನಿಕರಿಗೆ ಪೃಶಾ ಸೇವಾ ಟ್ರಸ್ಟ್ ಉಡುಪಿ-ಮಣಿಪಾಲ ಮತ್ತು ತ್ರಿವರ್ಣ ಕಲಾ ಕೇಂದ್ರ ಮಣಿಪಾಲ ಇವರ ವತಿಯಿಂದ ಒಂದು ದಿನದ ಉಚಿತ ಚಿತ್ರಕಲಾ ಕಾರ್ಯಾಗಾರವನ್ನು ಅ.20ರ ಬೆಳಗ್ಗೆ 9ರಿಂದ ಸಂಜೆ 5:30ರ ವರೆಗೆ ಮಣಿಪಾಲದ ತ್ರಿವರ್ಣ ಕಲಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.

‘ಪೃಶಾ ವರ್ಣ’ ಕಾರ್ಯಾಗಾರವನ್ನು ಉಡುಪಿಯ ಖ್ಯಾತ ಮನೋವೈದ್ಯರು ಮತ್ತು ಡಾ. ಎ. ವಿ. ಬಾಳಿಗ ಮೆಮೋರಿಯಲ್ ಆಸ್ಪತ್ರೆಯ ನಿರ್ದೇಶಕ ಡಾ. ಪಿ.ವಿ.ಭಂಡಾರಿ ಉದ್ಘಾಟಿಸಲಿದ್ದಾರೆ. ಉಡುಪಿ ಚಿತ್ರಕಲಾ ಮಂದಿರ ಕಲಾ ವಿದ್ಯಾಲಯದ ನಿರ್ದೇಶಕ ಡಾ.ಯು.ಸಿ.ನಿರಂಜನ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಕಾರ್ಯಾಗಾರದಲ್ಲಿ ಕಲಾವಿದರಾದ ಜನಾರ್ದನ ಹಾವಂಜೆ ಹಾಗೂ ತ್ರಿವರ್ಣ ಕಲಾ ಕೇಂದ್ರದ ನಿರ್ದೇಶಕ ಹರೀಶ್ ಸಾಗಾ ತರಬೇತಿ ನೀಡಲಿ ದ್ದಾರೆ. ಕಾರ್ಯಾಗಾರದಲ್ಲಿ ಭಾಗವಹಿಸಲು 30 ಮಂದಿ ಅವಕಾಶವಿರುತ್ತದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News