​ಮೂಡುಬಿದಿರೆ : ಸಿಡಿಲಿಗೆ ಮಹಿಳೆ ಬಲಿ

Update: 2019-10-17 15:02 GMT

ಮೂಡುಬಿದಿರೆ: ಗುರುವಾರ ಸಂಜೆ ಬಡಿದ ಸಿಡಿಲಿಗೆ ಮಹಿಳೆಯೋರ್ವರು ಬಲಿಯಾದ ಘಟನೆ ಕರಿಂಜೆ ಗ್ರಾಮದ ಅಜ್ಜಿಬೆಟ್ಟು ಎಂಬಲ್ಲಿ ನಡೆದಿದೆ.

ಅಪ್ಪು ಶೆಟ್ಟಿ ಎಂಬವರ ಪತ್ನಿ ಅಪ್ಪಿ ಶೆಡ್ತಿ (80) ಮೃತರು ಎಂದು ಗುರುತಿಸಲಾಗಿದೆ.

ಮೂಡುಬಿದಿರೆಯಲ್ಲಿ ಇಂದು ಸಂಜೆ ಭಾರೀ ಮಳೆ ಬರುತ್ತಿದ್ದ ಸಂದರ್ಭ ಅಪ್ಪಿ ಶೆಡ್ತಿ ತನ್ನ ಮಗಳ ಜತೆ ಮನೆಯ ಚಾವಡಿಯ ಕಿಟಕಿ ಬಳಿ ಕುಳಿತಿದ್ದರು. ಈ ವೇಳೆ ಮನೆಯ ಗೋಡೆಗೆ ಸಿಡಿಲು ಬಡಿದ ಪರಿಣಾಮ ಅಲ್ಲೆ ಪಕ್ಕದಲ್ಲಿ ಕುಳಿತಿದ್ದ ಮಹಿಳೆ ನೆಲಕ್ಕೆ ಬಿದ್ದರೆನ್ನಲಾಗಿದೆ. ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆ ಮೃತಪಟ್ಟರೆನ್ನಲಾಗಿದೆ.

ಅವರಿಗೆ ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿ ಇದ್ದಾರೆ. ಮೂಡುಬಿದಿರೆ ತಹಶೀಲ್ದಾರ್ ಅನಿತಾ ಲಕ್ಷ್ಮಿ, ಪ್ರಭಾರ ಕಂದಾಯ ನಿರೀಕ್ಷಕ ಶ್ರೀನಿವಾಸ್, ಗ್ರಾಮ ಲೆಕ್ಕಾಧಿಕಾರಿ ಭವ್ಯಾ, ಪುರಸಭಾ ಸದಸ್ಯ ಜೊಸ್ಸಿ ಮಿನೇಜಸ್, ಪೊಲೀಸ್ ಉಪ ನಿರೀಕ್ಷಕ ದೇಜಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News