ಭಟ್ಕಳ: ಮನೆಗೆ ನುಗ್ಗಿ ನಗ ನಗದು ಕಳವು
Update: 2019-10-17 16:10 GMT
ಭಟ್ಕಳ: ಮನೆಯ ಬಾಗಿಲು ಮುರಿದು ಒಳ ನುಗ್ಗಿದ ದುಷ್ಕರ್ಮಿಗಳು ಮನೆಯಲ್ಲಿದ್ದ 15 ಸಾವಿರು ರೂ ನಗದು ದೋಚಿ ಪರಾರಿಯಾಗಿರುವ ಘಟನೆ ತಾಲೂಕಿನ ಪುರವರ್ಗ ಪಂಚಾಯತ್ ವ್ಯಾಪ್ತಿಯ ಮುಗುಳಿ ಹೊಂಡಾ ಚರ್ಚ್ ಬಳಿ ನಡೆದಿದೆ.
ಮುಹಮ್ಮದ್ ನಾಸಿರ್ ಬ್ಯಾರಿ ಎಂಬವರ ಮನೆಯಲ್ಲಿ ಕಳವು ನಡೆದಿದ್ದು, ಅವರು ಎರಡು ದಿನಗಳಿಂದ ಮನೆಗೆ ಬೀಗ ಹಾಕಿ ಹೊರಹೋಗಿದ್ದರು.
ನಾಸಿರ್ ಕುಟುಂಬವು ಬುಧವಾರ ಮನೆಗೆ ಮರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಭಟ್ಕಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.