ಶಿರೂರು: ಕಾರು-ಲಾರಿ ಢಿಕ್ಕಿ; ಕಾರು ಚಾಲಕ ಮೃತ್ಯು

Update: 2019-10-17 16:25 GMT

ಶಿರೂರು, ಅ.17: ಲಾರಿ ಹಾಗೂ ಕಾರು ಮುಖಾಮುಖಿ ಢಿಕ್ಕಿಯಾಗಿ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ರಾತ್ರಿ 7 ಗಂಟೆ ಸುಮಾರಿಗೆ ಶಿರೂರು ಸಮೀಪದ ಸಂಕದಗುಂಡಿ ಸೇತುವೆ ಬಳಿ ನಡೆದಿದೆ.

ಕಾರನ್ನು ಚಲಾಯಿಸುತಿದ್ದ ವಂಡ್ಸೆಯ ನಿತಿನ್ ಮೊಗೇರ (23) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದು, ಅವರೊಂದಿಗೆ ಕಾರಿನಲ್ಲಿದ್ದ ಸಂತೋಷ್ ಶೆಟ್ಟಿ (20) ಎಂಬವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸ ಲಾಗಿದೆ.

ಲಾರಿ ಕುಂದಾಪುರದಿಂದ ಭಟ್ಕಳದತ್ತ ಸಾಗುತಿದ್ದು, ಕಾರು ಕುಂದಾಪುರದತ್ತ ಹೋಗುತ್ತಿತ್ತು. ಮುಖಾಮುಖಿ ಢಿಕ್ಕಿಯಿಂದ ಕಾರಿನ ಮುಂಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಕಾರು ಚಲಾಯಿಸುತಿದ್ದ ನಿತಿನ್ ಸ್ಥಳದಲ್ಲೇ ಮೃತಪಟ್ಟರು.

ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News