ಮಂಗಳೂರು: ಹಿರಿಯ ನ್ಯಾಯವಾದಿ ಎಂ.ಟಿ. ನಾರಾಯಣ ಶೆಟ್ಟಿ ನಿಧನ

Update: 2019-10-18 10:43 GMT

ಮಂಗಳೂರು: ಹಿರಿಯ ನ್ಯಾಯವಾದಿ, ರೈಲ್ವೇ ಇಲಾಖೆ ಅಧಿಕಾರಿ ಎಂ.ಟಿ. ನಾರಾಯಣ ಶೆಟ್ಟಿ (83) ನಗರದಲ್ಲಿ ಶುಕ್ರವಾರ ಬೆಳಗ್ಗೆ ನಿಧನರಾದರು.

ಮೃತರು  ಮಂಗಳೂರಿನ  ಕಾನೂನು ಕಾಲೇಜಿನಲ್ಲಿ ಎಲ್ ಎಲ್ ಬಿ ಪೂರ್ಣಗೊಳಿಸಿದರು. ಅಲ್ಲದೆ, ವಿದ್ಯಾರ್ಥಿಗಳ ಯೂನಿಯನ್ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ವಾಲಿಬಾಲ್ ಆಟಗಾರರಾಗಿದ್ದರು.

 ರೈಲ್ವೆ ಇಲಾಖೆಯಿಂದ ನಿವೃತ್ತಗೊಂಡ ಬಳಿಕ 1995ರಲ್ಲಿ ಕಾಸಗೋಡಿನಲ್ಲಿ ನ್ಯಾಯವಾದಿಯಾಗಿ ಪ್ರ್ಯಾಕ್ಟೀಸ್ ಆರಂಭಿಸಿದರು.  2005ರಲ್ಲಿ ಮಂಗಳೂರು ಬಾರ್ ಅಸೋಸಿಯೇಶನ್ ನಲ್ಲು ತಮ್ಮ ಛಾಪನ್ನು ಮೂಡಿಸಿದ್ದಾರೆ.

ಮೃತರು ಪತ್ನಿ, ನಾಲ್ವರು ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News