ಕಂಬದಕೋಣೆ: ನೀರುಪಾಲಾಗಿದ್ದ ಮತ್ತೋರ್ವ ಬಾಲಕನ ಮೃತದೇಹ ಪತ್ತೆ

Update: 2019-10-19 07:29 GMT

ಬೈಂದೂರು, ಅ.19: ಎರಡು ದಿನಗಳ ಹಿಂದೆ ಕಂಬದಕೋಣೆ ಗ್ರಾಮದ ಎಡಮಾವಿನ ಹೊಳೆ ಬೊಬ್ಬರ್ಯನ ಗುಂಡಿಯಲ್ಲಿ ಹೊಳೆಪಾಲಾಗಿದ್ದ ಇಬ್ಬರು ಶಾಲಾ ಬಾಲಕರ ಪೈಕಿ ಮತ್ತೋರ್ವನ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ.

ಇಲ್ಲಿನ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ ರಿತೇಶ್ ಶೆಟ್ಟಿ(12)ಯ ಮೃತದೇಹ ಇಂದು ಮುಂಜಾನೆ ಇಲ್ಲಿನ ರೈಲ್ವೆ ಸೇತುವೆ ಬಳಿ ಪೊದೆಯಲ್ಲಿ ಪತ್ತೆಯಾಗಿದೆ. ನೀರುಪಾಲಾಗಿದ್ದ ಇನ್ನೋರ್ವ ಬಾಲಕ ವಂಶಿತ್ ಶೆಟ್ಟಿ(12)ಯ ಮೃತದೇಹ ಗುರುವಾರ ಸಂಜೆ ಪತ್ತೆಯಾಗಿತ್ತು.

ಅ.17ರಂದು ವಂಶಿತ್ ಶೆಟ್ಟಿ ಹಾಗೂ ರಿತೇಶ್ ಶೆಟ್ಟಿ ಇನ್ನಿಬ್ಬರು ಗೆಳೆಯರೊಂದಿಗೆ ಆಟವಾಡುತ್ತಾ ಕೈಕಾಲು ತೊಳೆಯಲೆಂದು ಹೊಳೆಗೆ ಇಳಿದಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಈ ಪೈಕಿ ವಂಶಿತ್ ಶೆಟ್ಟಿಯ ಮೃತದೇಹ ಅಂದೇ ಸಂಜೆ ಪತ್ತೆಯಾಗಿತ್ತು. ರಿತೇಶ್ ಗಾಗಿ ಅಗ್ನಿಶಾಮಕ ದಳ, ಮುಳುಗ ತಜ್ಞರು ಶೋಧ ಮುಂದುವರಿಸಿದ್ದರು.

ಇಂದು ಬೆಳಗ್ಗೆ ದೋಣಿಯ ನೆರವಿನಿಂದ ಶೋಧ ಮುಂದುವರಿಸಿದಾಗ ರೈಲ್ವೆ ಸೇತುವೆ ಬಳಿ ಬಾಲಕನ ಮೃತದೇಹ ಪತ್ತೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News