ಅ.21ರಂದು ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ

Update: 2019-10-20 09:04 GMT

ಕಾಸರಗೋಡು : ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅ.21ರಂದು ನಡೆಯಲಿದ್ದು , 2,14, 779 ಮಂದಿ ತಮ್ಮ ಹಕ್ಕು ಚಲಾಯಿಸುವರು.  ಮತದಾನಕ್ಕಾಗಿ 198 ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ.   ಪೈವಳಿಕೆ  ನಗರ ಸರಕಾರಿ  ಶಾಲೆಯಿಂದ  ಇಂದು  ಬೆಳಗ್ಗೆ ಮತಗಟ್ಟೆಗಳಿಗೆ ಸಾಮಗ್ರಿಗಳನ್ನು ಕೊಂಡೊಯ್ಯಲಾಯಿತು.

ಸೋಮವಾರ ಬೆಳಗ್ಗೆ 7ರಿಂದ ಸಂಜೆ  6 ಗಂಟೆ ತನಕ ಮತದಾನ ನಡೆಯಲಿದೆ.

ಇವರಲ್ಲಿ 1,06,928 ಮಹಿಳೆಯರು, 1,07,851 ಮಂದಿ ಪುರುಷರು, 1240 ವಿಶೇಷಚೇತನರು ಇದ್ದಾರೆ. ಚುನಾವಣೆಯ ವೇಳೆ 20 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ನಡೆಯಲಿದೆ. 49 ಮತಗಟ್ಟೆಗಳಲ್ಲಿ  ಅರೆಸೇನಾ ಪಡೆ ಯನ್ನು ನಿಯೋಜಿಸಲಾಗಿದೆ. 257 ಮತಯಂತ್ರಗಳನ್ನು ಸಜ್ಜುಗೊಳಿಸಲಾಗಿದೆ. ಸೂಕ್ಷ್ಮ ಮತಗಟ್ಟೆಗಳಲ್ಲಿ ಪೊಲೀಸ್  ನಿಗಾ ಇರಿಸಿದ್ದಾರೆ. 105 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಎಲ್ಲಾಮತಗಟ್ಟೆಗಳಲ್ಲಿ  ವೀಡಿಯೊ ಚಿತ್ರೀಕರಣ ನಡೆಯಲಿದೆ. 53ರಲ್ಲಿ ಮೈಕ್ರೋ ನಿರೀಕ್ಷಕರು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಪರ್ಧಾಧಾರಿಗಳ ಗುರುತಿಗೆ 198 ಮಹಿಳಾ ಪೋಲಿಂಗ್ ಸಹಾಯಕರನ್ನು ನೇಮಿಸಲಾ ಗಿದೆ. ಶಾಂತಿಯುತ ಹಾಗೂ ಪಾರದರ್ಶಕ ಮತದಾನಕ್ಕಾಗಿ ಆಯೋಗ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ.

ಕಾಂಗ್ರೆಸ್ ನೇತೃತ್ವದ  ಮೈತ್ರಿಕೂಟವಾದ  ಯು ಡಿ ಎಫ್ ನಿಂದ  ಎಂ.ಸಿ ಖಮರುದ್ದೀನ್ ,   ಸಿಪಿಐಎಂ ನೇತೃತ್ವದ ಎಲ್ ಡಿ ಎಫ್ ನಿಂದ  ಎಂ. ಶಂಕರ ರೈ ,  ಬಿಜೆಪಿಯಿಂದ  ಕುಂಟಾರು ರವೀಶ ತಂತ್ರಿ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳಾಗಿದ್ದು,  ಪಕ್ಷೇತರರು ಸೇರಿದಂತೆ ಏಳು ಮಂದಿ ಕಣದಲ್ಲಿದ್ದಾರೆ .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News