ಪಿ.ಎಫ್.ಐ. ಅಂಗರಗುಂಡಿ: ಮ್ಯಾರಥಾನ್, ಕ್ರೀಡಾಕೂಟ

Update: 2019-10-20 10:03 GMT

ಮಂಗಳೂರು :  ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಂಗರಗುಂಡಿ ವಲಯದ ವತಿಯಿಂದ "ಜನಾರೋಗ್ಯವೇ ರಾಷ್ಟ್ರ ಶಕ್ತಿ" ರಾಷ್ಟ್ರೀಯ ಅಭಿಯಾನ ಅಂಗರಗುಂಡಿಯಲ್ಲಿ ನಡೆಯಿತು.

ಅಂಗರಗುಂಡಿ ವಾಲಿಬಾಲ್ ಮೈದಾನದಿಂದ ಆರಂಭಗೊಂಡ ಮ್ಯಾರಥಾನ್ ಗೆ ಫಿಎಫ್ಐ ಅಂಗರಗುಂಡಿ ವಲಯಾಧ್ಯಕ್ಷ ಸಿದ್ದೀಕ್ ಅಂಗರಗುಂಡಿ ಚಾಲನೆ ನೀಡಿದರು.

ಬಜ್ಪೆ ಡಿವಿಷನ್ ಕಾರ್ಯದರ್ಶಿ ಸಮೀರ್ ಅಂಗರಗುಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಅಂಗರಗುಂಡಿ ವಾಲಿಬಾಲ್ ಮೈದಾನದಲ್ಲಿ  ಯೋಗ ಪ್ರದರ್ಶನ, ಆತ್ಮ ರಕ್ಷಣೆ ಕಲೆ ಪ್ರದರ್ಶನ, ದೈಹಿಕ ಕಲೆ ಪ್ರದರ್ಶನ, ಹಾಗೂ ಕ್ರಿಡಾಕೂಟ ಹಾಗು ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ಜಿಲ್ಲಾ ಕಾರ್ಯದರ್ಶಿ ಖಾದರ್ ಕುಲಾಯಿ ಸಮಾರೋಪ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಎಸ್ಡಿಪಿಐ ಅಂಗರಗುಂಡಿ ಬ್ರಾಂಚ್ ಅಧ್ಯಕ್ಷ  ರಫೀಕ್ ಅಂಗರಗುಂಡಿ, ಯುವ ಉದ್ಯಮಿ ಸಿದ್ದೀಕ್ ಸಾಬಾ ಎಂಟರ್ಪ್ರೈಸಸ್ ಮತ್ತಿತರರು ಉಪಸ್ಥಿತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News