ಮೂಡುಬಿದಿರೆ: ತೌಳವ ಇಂದ್ರ ಸಮಾಜ ಕ್ರೀಡಾಕೂಟಕ್ಕೆ ಚಾಲನೆ

Update: 2019-10-20 13:54 GMT

ಮೂಡುಬಿದಿರೆ: ಇಲ್ಲಿನ ತೌಳವ ಇಂದ್ರ ಸಮಾಜದ ಆಶ್ರಯದಲ್ಲಿ ಸಮಾಜ ಬಾಂಧವರಿಗೆ ಕ್ರೀಡಾಕೂಟವನ್ನು ಶ್ರೀಧವಲಾ ಕಾಲೇಜಿನ ಮೈದಾನದಲ್ಲಿ ರವಿವಾರ ಆಯೋಜಿಸಲಾಯಿತು. 

ಧವಲಾ ಕಾಲೇಜಿನ ಮಾತೃಶ್ರೀ ಸಭಾಭವನದಲ್ಲಿ ಸಮಾಜದ ಹಿರಿಯರಾದ ವಿಮಲಾ ಸುದರ್ಶನ್ ಇಂದ್ರ ಬಜಗೋಳಿ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ಸಂಘದ ನಿರ್ದೇಶಕ, ಕ್ರೀಡಾ ಸಲಹೆಗಾರ ಅಕ್ಷಯ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ತೌಳವ ಇಂದ್ರ ಸಮಾಜದ ಎಲ್ಲಾ ವಯೋಮಾನದ ಸದಸ್ಯರು, ಯುವಪೀಳಿಗೆ ಹಾಗೂ ಎಳೆಯರೊಡನೆ ಉತ್ತಮ ಬಾಂಧವ್ಯ, ಗೆಳೆತನ ಮೂಡಿಸುವ ನಿಟ್ಟಿನಲ್ಲಿ ಕ್ರೀಡಾಕೂಟವನ್ನು ಆಯೋಜಿಸಿದ್ದೇವೆ. ಮನರಂಜನೆಯೊಂದಿಗೆ ಬೆಸುಗೆ ಮೂಡಿಸುವ ಉದ್ದೇಶ ನಮ್ಮದ್ದು ಎಂದರು. 

ಸಂಘದ ಅಧ್ಯಕ್ಷ ವೃಷಭ ಕುಮಾರ ಇಂದ್ರ ಅಧ್ಯಕ್ಷತೆವಹಿಸಿದ್ದರು. ಹಿರಿಯರಾದ ಸುನಂದಾ ಇಂದ್ರ, ಸಂಘದ ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಎಂ, ಕೋಶಾಧಿಕಾರಿ ಧರಣೇಂದ್ರ ಇಂದ್ರ, ಶೀತಲ್ ಕುಮಾರ್, ನಿರ್ದೇಶಕರಾದ ರಾಜಮತಿ ಪಿ., ಜಿನಚಂದ್ರ ಇಂದ್ರ, ಸುವಿಧಿ ಇಂದ್ರ, ಸುರೇಂದ್ರ ಇಂದ್ರ, ಅಭಯ್ ಕುಮಾರ್, ರತ್ನಾಕರ ಕುಮಾರ್, ಪ್ರಮೋದ್ ಕುಮಾರ್, ಸುಕೀರ್ತಿ ಇಂದ್ರ, ಕಿಶೋರ್ ಕುಮಾರ್ ಇಂದ್ರ ಉಪಸ್ಥಿತರಿದ್ದರು. 

ಪ್ರಮೋದ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News