ಹುತಾತ್ಮ ಪೊಲೀಸ್ ಸಿಬ್ಬಂದಿ ಮಹೇಶ್ ಲಮಾಣಿ ಹೆತ್ತವರಿಗೆ ಸನ್ಮಾನ, ಧನಸಹಾಯ

Update: 2019-10-22 07:02 GMT

ಮಂಗಳೂರು, ಅ.22: ಕರ್ತವ್ಯನಿರತರಾಗಿದ್ದ ವೇಳೆ ಹುತಾತ್ಮರಾಗಿರುವ ಪೊಲೀಸ್ ಸಿಬ್ಬಂದಿ ಮಹೇಶ್ ಲಮಾಣಿ ಅವರ ಪೋಷಕರಾದ ಚೆನ್ನಪ್ಪ ಹ್ಯಾಂಕೆಪ್ಪ ಲಮಾಣಿ ಹಾಗೂ ನೀಲಮ್ಮ ಚೆನ್ನಪ್ಪ ಲಮಾಣಿ ಅವರನ್ನು ಬಿಸಿಸಿಐ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ ಮತ್ತು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ನ ಸ್ಥಾಪಕಾಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ ಅವರು ಸನ್ಮಾನಿಸಿ, ಧನಸಹಾಯ ವಿತರಿಸಿದರು.

ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಕಚೇರಿಯಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ.ವಿಕ್ರಮ್ ಅಮಟೆ ಸಮ್ಮುಖದಲ್ಲಿ ಮಂಗಳವಾರ ನಡೆದ ಸರಳ ಈ ಕಾರ್ಯಕ್ರಮದಲ್ಲಿ ನಂಡೆ ಪೆಂಙಳ್ ಅಧ್ಯಕ್ಷ ನೌಶಾದ್ ಹಾಜಿ ಸೂರಲ್ಪಾಡಿ, ಎಸ್.ಎಂ.ಮುಸ್ತಫ ಭಾರತ್, ಫತೇ ಮುಹಮ್ಮದ್, ಮುಮ್ತಾಝ್ ಅಲಿ, ಮನ್ಸೂರ್ ಆಝಾದ್, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ನ ಅಧ್ಯಕ್ಷ ರಿಯಾಝ್ ಕಣ್ಣೂರು, ಪ್ರಧಾನ ಕಾರ್ಯದರ್ಶಿ ಹಮೀದ್ ಕಣ್ಣೂರು, ಸದಸ್ಯರಾದ ನಕಾಶ್, ಮಜೀದ್ ತುಂಬೆ ಮತ್ತಿತರರು ಉಪಸ್ಥಿತರಿದ್ದರು.

ಕಳೆದ ಮಾರ್ಚ್ 19ರಂದು ಗುರುಪುರ ಕೈಕಂಬ ಬಳಿ, ಕರ್ತವ್ಯಕ್ಕೆ ತರಳುತ್ತಿದ್ದ ಸಂದರ್ಭ ಮಹೇಶ್ ಲಮಾಣಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News