ಕುಂದಾಪುರ: ಅ.25ರಿಂದ ಫ್ರೆಂಡ್ಸ್ ಟ್ರೋಫಿ ಕಬಡ್ಡಿ

Update: 2019-10-22 13:41 GMT

ಕುಂದಾಪುರ, ಅ.22: ಇಲ್ಲಿನ ಖಾರ್ವಿಕೇರಿಯ ಫ್ರೆಂಡ್ಸ್ ಗ್ರೂಪ್ ಆಶ್ರಯ ದಲ್ಲಿ ದೀಪಾವಳಿ ಪ್ರಯುಕ್ತ ಅಖಿಲ ಕೊಂಕಣ ಖಾರ್ವಿ ಸಮಾಜ ಬಾಂಧವರಿ ಗಾಗಿ ‘ಫ್ರೆಂಡ್ಸ್ ಟ್ರೋಫಿ’ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ವನ್ನು ಅ.25 ಮತ್ತು 26ರಂದು ಖಾರ್ವಿಕೇರಿಯ ವೇಂಕಟೇಶ್ ಇಂಡಸ್ಟ್ರೀಸ್ ಮೈದಾನದಲ್ಲಿ ನಿರ್ಮಿಸಲಾಗಿರುವ ಕಬಡ್ಡಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪಂದ್ಯಾಟವನ್ನು ಅ.25ರಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಗೋವಾ ಸೇರಿದಂತೆ ವಿವಿಧ ರಾಜ್ಯಗಳಿಂದ ತಂಡಗಳು ಆಗಮಿಸುವ ನಿರೀಕ್ಷೆ ಇದ್ದು, ಅಗ್ರಪ್ರಶಸ್ತಿ ವಿಜೇತ ತಂಡ 60,000 ರೂ.ನಗದು ಹಾಗೂ ಶಾಶ್ವತ ಫಲಕ, ದ್ವಿತೀಯ ಸ್ಥಾನಿ ತಂಡ 40,000 ರೂ.ಹಾಗೂ ಶಾಶ್ವತ ಫಲಕ ಪಡೆಯಲಿವೆ. ಅಲ್ಲದೆ ಉತ್ತಮ ಹಿಡಿತಗಾರ, ದಾಳಿಗಾರ, ಸವ್ಯಸಾಚಿ ಆಟಗಾರ ಸೇರಿದಂತೆ ಶಿಸ್ತು ಬದ್ಧ ತಂಡಕ್ಕೆ ವಿಶೇಷ ನಗದು ಪುರಸ್ಕಾರವನ್ನೂ ನೀಡಲಾಗುವುದು.

26ರಂದು ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಉಪಸ್ಥಿತ ರಿರುವ ಗಣ್ಯರು ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಿದ್ದಾರೆ.ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಸನ್ಮಾನಿಸಲಾಗುವುದು.

ಹೆಚ್ಚಿನ ಮಾಹಿತಿಗೆ ಮೊಬೈಲ್ ನಂ.: 9448328614, 8747089828 ಅಥವಾ ಸಂಘಟಕರನ್ನು ಸಂಪರ್ಕಿಸಲು ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News