ಕರಾವಳಿ ಐಎಂಎ ನೂತನ ಪದಾಧಿಕಾರಿಗಳ ಪದಗ್ರಹಣ

Update: 2019-10-22 13:50 GMT

ಉಡುಪಿ, ಅ.22: ಭಾರತೀಯ ವೈದ್ಯಕೀಯ ಸಂಘ(ಐಎಂಎ) ಉಡುಪಿ- ಕರಾವಳಿ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಉಡುಪಿ ಅಂಬಲಪಾಡಿಯ ಹೊಟೇಲ್ ಕಾರ್ತಿಕ್ ಎಸ್ಟೇಟ್‌ನ ಮಧುವನ್ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿತು.

ಪದಪ್ರದಾನ ಅಧಿಕಾರಿಯಾಗಿ ಉಡುಪಿಯ ಹಿರಿಯ ವೈದ್ಯ, ಮಣಿಪಾಲ ಕೆಎಂಸಿ ಆಸ್ಪತ್ರೆಯ ಮಾಜಿ ಡೀನ್ ಪ್ರೊ.ಶ್ರೀಪತಿ ರಾವ್ ನೂತನ ಅಧ್ಯಕ್ಷ ಡಾ.ಉಮೇಶ್ ಪ್ರಭು ಹಾಗೂ ಕಾರ್ಯದರ್ಶಿ ಡಾ. ಪ್ರಕಾಶ್ ಭಟ್ ಸೇರಿದಂತೆ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.
ಮುಖ್ಯ ಅತಿಥಿಯಾಗಿ ಮೂಳೆ ತಜ್ಞ ಡಾ.ಅಜಿತ್ ಕುಮಾರ್ ಐಎಂಎಯ ನಿಯಮಾವಳಿ, ಪದಾಧಿಕಾರಿಗಳ ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಐಎಂಎ ನಿಗರ್ಮನ ಅಧ್ಯಕ್ಷ ಡಾ.ಗುರುಮೂರ್ತಿ ಭಟ್ ವಹಿಸಿದ್ದರು. ಕಾರ್ಯದರ್ಶಿ ಡಾ.ಕೃಷ್ಣಾನಂದ ಮಲ್ಯ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಡಾ.ರಾಜಲಕ್ಷ್ಮೀ ಲೆಕ್ಕಪತ್ರ ವಿವರ ನೀಡಿದರು.

ವೇದಿಕೆಯಲ್ಲಿ ಡಾ.ವಿನಾಯಕ ಶೆಣೈ ಉಪಸ್ಥಿತರಿದ್ದರು. ಡಾ.ರಮಾ ಶೆಟ್ಟಿ ಶಿರ್ವ ಹಾಗೂ ಡಾ.ವಿಜಯಾ ಶಿರ್ವ ಕಾರ್ಯಕ್ರಮ ನಿರೂಪಿಸಿದರು. ಡಾ. ರಂಜನಿ ನಾಯಕ್ ವಂದಿಸಿದರು. ಐಎಂಎ ಮಹಿಳಾ ವಿಭಾಗದವರಿಂದ ವಿವಿಧ ನೃತ್ಯ ಕಾರ್ಯಕ್ರಮ ಮತ್ತು ಮೂಳೆತಜ್ಞ ಡಾ.ಭಾಸ್ಕರಾನಂದ ಕುಮಾರ್ ಬಳಗ ದಿಂದ ‘ಭೀಷ್ಮ ಸುದರ್ಶನ ದರ್ಶನ’ ಯಕ್ಷಗಾನ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News