ವಾಲಿಬಾಲ್: ಪ್ರಶಸ್ತಿ ವಿಜೇತ ತುಂಬೆ ಬಿಎ ಶಾಲೆಯ ಬಾಲಕರ ತಂಡ

Update: 2019-10-22 14:08 GMT

ಬಂಟ್ವಾಳ, ಅ. 22: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ 14ರ ವಯೋಮಿತಿಯ ಬಾಲಕರ ವಾಲಿಬಾಲ್ ಪಂದ್ಯಾಟದಲ್ಲಿ ತುಂಬೆ ಸೆಂಟ್ರಲ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಬಾಲಕರ ತಂಡ ಪ್ರಥಮ ಸ್ಥಾನ ಪಡೆದಿದೆ.

ಬಳಿಕ ಕೊಡಗು ಜಿಲ್ಲೆಯ ಕುಶಾಲನಗರದ ಕೂಡಿಗೆ ವಸತಿ ಶಾಲೆಯಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದೆ. ಟ್ರಸ್ಟ್‍ನ ಸಂಸ್ಥಾಪಕ ಡಾ. ಬಿ. ಅಹ್ಮದ್ ಹಾಜಿ ಮುಹಿಯುದ್ದೀನ್, ಪ್ರಾಂಶುಪಾಲ ಕೆ. ಎನ್. ಗಂಗಾಧರ ಆಳ್ವ, ದೈಹಿಕ ಶಿಕ್ಷಕರಾದ ಜಗದೀಶ ರೈ, ಶಾಲಾ ದೈಹಿಕ ಶಿಕ್ಷಕಿಯರಾದ ಮೋಲಿ ಎಡ್ನಾ ಗೊನ್ಸಾಲ್ವ್‍ಸ್, ವಿದ್ಯಾ ಕೆ., ವಿದ್ಯಾರ್ಥಿಗಳಾದ ಸಮ್ಮಾಸ್, ಹಿಶಾನ್, ಶಫೀಕ್, ಜಾಬೀರ್, ಇಶಾನ್, ಶಹರಾಂ, ಶರಫ್, ಅಪ್ರಾಝ್, ಸಲೀತ್, ಸೆಹೀರ್, ತೋಹ, ಸುಜಿತ್, ಪ್ರೀತಂ, ರಮೀಝ್ ರಾಝ ಚಿತ್ರದಲ್ಲಿ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News