ಹೃದಯಾಘಾತ: ಕಾಂಗ್ರೆಸ್ ನಾಯಕಿ ಜಯಶ್ರೀ ಕೃಷ್ಣರಾಜ್ ನಿಧನ

Update: 2019-10-28 17:21 GMT

ಮಲ್ಪೆ, ಅ. 28: ಕಾಂಗ್ರೆಸ್ ನಾಯಕಿ ಜಯಶ್ರೀ ಕೃಷ್ಣರಾಜ್ (68) ಹೃದಯಾಘಾತದಿಂದ ದಿಲ್ಲಿಯಲ್ಲಿ‌ ಸೋಮವಾರ ನಿಧನರಾದರು.

ಮಲ್ಪೆ ಮಧ್ವರಾಜ್ ಅವರ ಸಹೋದರ ಕೃಷ್ಣರಾಜ ಅವರ ಪತ್ನಿಯಾಗಿರುವ ಜಯಶ್ರೀ, ದೆಹಲಿಯಲ್ಲಿರುವ ಮಗಳ‌ ಮನೆಯಲ್ಲಿ ನಿಧನರಾದರು.

ಉಡುಪಿ ನಗರಸಭೆ ಸದಸ್ಯೆಯಾಗಿದ್ದ ಅವರು, ಕೆಪಿಸಿಸಿ ಮಹಿಳಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಜಿಲ್ಲೆಯಲ್ಲಿ ಮಹಿಳಾ ಕಾಂಗ್ರೆಸ್ ಕಟ್ಟುವಲ್ಲಿ ವಿಶೇಷ ಶ್ರಮ ವಹಿಸಿದ್ದ ಇವರು ಲಯನ್ಸ್, ಜೇಸಿಐ ಸಂಸ್ಥೆಯಲ್ಲಿ ಸಕ್ರೀಯರಾಗಿದ್ದರು. 

ಮೃತರು ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News