ಗಾಂಜಾ ಸೇವನೆ: ಮೂವರು ವಿದ್ಯಾರ್ಥಿಗಳು ವಶಕ್ಕೆ
Update: 2019-10-29 16:47 GMT
ಮಣಿಪಾಲ, ಅ.29: ಸರಳಬೆಟ್ಟು ಹೈ ಪಾಯಿಂಟ್ ಆಪಾರ್ಟ್ಮೆಂಟ್ ಬಳಿ ಅ.27ರಂದು ರಾತ್ರಿ ವೇಳೆ ಗಾಂಜಾ ಸೇವನೆ ಮಾಡುತ್ತಿದ್ದ ಮೂವರು ವಿದ್ಯಾರ್ಥಿಗಳನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಮಣಿಪಾಲದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳಾದ ಆಶೀಶ್ ರಾಜ ಶೇಖರ್(20), ಪ್ರಿತೇಶ್(19), ಅಭಿಷೇಕ್ ಬಾಬ್ಲ(19) ಎಂಬವರನ್ನು ವಶಕ್ಕೆ ಪಡೆದು ಮಣಿಪಾಲ ಕೆಎಂಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ಮುಂದೆ ಹಾಜರುಪಡಿಸಿದ್ದು ಇವರನ್ನು ಪರೀಕ್ಷಿಸಿದ ವೈದ್ಯರು ಎಲ್ಲರು ಗಾಂಜಾ ಸೇವಿಸಿರುವ ಬಗ್ಗೆ ದೃಢಪತ್ರ ನೀಡಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.