ಪೆಹ್ಲೂ ಖಾನ್ ವಿರುದ್ಧ ಗೋ ಕಳ್ಳಸಾಗಣಿಕೆ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ಆದೇಶ

Update: 2019-10-30 12:46 GMT

ಜೈಪುರ್: ಎರಡು ವರ್ಷಗಳ ಹಿಂದೆ ರಾಜಸ್ಥಾನದ ಆಲ್ವಾರ್ ಎಂಬಲ್ಲಿ ಸ್ವಘೋಷಿತ ಗೋರಕ್ಷಕರಿಂದ ಗುಂಪು ಥಳಿತಕ್ಕೊಳಗಾಗಿ ಹತ್ಯೆಗೀಡಾದ ಹೈನು ಕೃಷಿಕ ಪೆಹ್ಲೂ ಖಾನ್ ವಿರುದ್ಧ ದಾಖಲಾದ ಪೊಲೀಸ್ ದೂರನ್ನು ರದ್ದುಗೊಳಿಸುವಂತೆ ರಾಜಸ್ಥಾನ ಹೈಕೋರ್ಟ್ ಇಂದು ಆದೇಶಿಸಿದೆ.

ಗೋವುಗಳನ್ನು ಹತ್ಯೆ ನಡೆಸುವ ಉದ್ದೇಶದಿಂದ ಸಾಗಾಟ ನಡೆಸಲಾಗುತ್ತಿತ್ತು ಎಂಬುದಕ್ಕೆ ಯಾವುದೇ ಆಧಾರವಿಲ್ಲವೆಂದು ಹೇಳಿ ರಾಜಸ್ಥಾನ ಗೋ ರಕ್ಷಣಾ ಕಾಯಿದೆಯನ್ವಯ ದಾಖಲಾದ ಪ್ರಕರಣವನ್ನು ಜಸ್ಟಿಸ್ ಪಂಕಜ್ ಭಂಡಾರಿ ನೇತೃತ್ವದ ಪೀಠ ರದ್ದುಗೊಳಿಸಿದೆ.

ಘಟನೆ ಎಪ್ರಿಲ್ 2017ರಲ್ಲಿ ನಡೆದಿತ್ತು. ಎಫ್‍ಐಆರ್ ವಿರುದ್ಧ ಪೆಹ್ಲೂ ಖಾನ್  ಪುತ್ರರು ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿ ಈ ಪ್ರಕರಣದಲ್ಲಿ ತಾವು ನಿಜವಾದ ಸಂತ್ರಸ್ತರೆಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News