ಮಂಜನಾಡಿ: ‘ಅಲ್ ಮದೀನ’ದಲ್ಲಿ ಮರ್ಹಬಾ ಯಾ ಶಹ್ ರ್ ರಬೀಹ್’ ಕಾಲ್ನಡಿಗೆ ಜಾಥಾ

Update: 2019-10-31 04:48 GMT

ನರಿಂಗಾನ, ಅ.30: ಮಂಜನಾಡಿ ಅಲ್ ಮದೀನ ವಿದ್ಯಾರ್ಥಿಗಳಿಂದ ಮೀಲಾದುನ್ನಬಿ ಪ್ರಯುಕ್ತ ‘ಮರ್ಹಬಾ ಯಾ ಶಹ್ ರ್ ರಬೀಹ್’ ಎಂಬ ಶೀರ್ಷಿಕೆಯೊಂದಿಗೆ ಬೃಹತ್ ಕಾಲ್ನಡಿಗೆ ಜಾಥಾವನ್ನು ಏರ್ಪಡಿಸಲಾಯಿತು.

ಅಲ್ ಮದೀನ ಹಿಫ್ಲ್ ಕಾಲೇಜಿನ ಪ್ರಾಂಶುಪಾಲ ಹಾಫಿಳ್ ಮರ್ಷದಿ ಹುಮೈದಿ ದುಆಗೈದರು. ಸಂಸ್ಥೆಯ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಧ್ವಜ ಹಸ್ತಾಂತರ ಮಾಡುವ ಮೂಲಕ ಜಾಥಾಕ್ಕೆ ಚಾಲನ ನೀಡಿದರು.

ಮುಹಮ್ಮದ್ ಕುಂಞಿ ಅಮ್ಜದಿ, ಇರ್ಫಾನ್ ಅಬ್ದುಲ್ಲ ನೂರಾನಿ, ಹಾಫಿಳ್ ಅಝೀಝ್ ಹಿಮಮಿ, ಝೈನುಲ್ ಆಬಿದ್ ಸಖಾಫಿ, ಅಬ್ದುರ್ರಝಾಕ್ ನಾವೂರು ಮತ್ತಿತರು ಉಪಸ್ಥಿತರಿದ್ದರು.

ಅನೀಸ್ ಸುರತ್ಕಲ್, ಅನ್ವರ್ ಸರಳಿಕಟ್ಟೆ, ದಾವೂದ್ ಮೂಳೂರು, ಮುಬ್ತಷಿಮ್ ಕುಪ್ಪೆಟ್ಟಿ ಸಂದೇಶ ಭಾಷಣ ಮಾಡಿದರು.

ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರ ಮಖ್ಬರ ಝಿಯಾರತ್ ನೊಂದಿಗೆ ಮರಿಕ್ಕಳದಿಂದ ಅಲ್ ಮದೀನಾ ಕ್ಯಾಂಪಸ್ ತನಕ ಸ್ಕೌಟ್, ಧಫ್ ಪ್ರದರ್ಶನದೊಂದಿಗೆ ಕಾಲ್ನಡಿಗೆ ಜಾಥಾ ನಡೆಯಿತು.

ಇಕ್ಬಾಲ್ ಮರ್ಝೂಖಿ ಸಖಾಫಿ ಸ್ವಾಗತಿಸಿದರು. ಶಫೀಕ್ ಬೊಳ್ಮಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News