ನಾಳೆ 'ಮರ್ಹಬಾ ಯಾ ರಬೀಅ್' ಕ್ಯೂ ಟೀಮ್ ಕಾರ್ಯಕರ್ತರ ಮೀಲಾದ್ ರ‍್ಯಾಲಿ

Update: 2019-11-02 16:01 GMT

ಬಂಟ್ವಾಳ, ನ.2: ಪ್ರವಾದಿ ಮುಹಮ್ಮದ್ (ಸ) ಜನಿಸಿದ ರಬಿವುಲ್ ಅವ್ವಲ್ ತಿಂಗಳಿಗೆ ಸ್ವಾಗತ ಕೋರುವ ಸಲುವಾಗಿ ಎಸ್ಸೆಸ್ಸೆಫ್ ವತಿಯಿಂದ ರಾಜ್ಯಾದ್ಯಂತ ಡಿವಿಶನ್ ಮಟ್ಟದಲ್ಲಿ ನಡೆಯುತ್ತಿರುವ ಮರ್ಹಬಾ ಯಾ ರಬೀಅ್ ಕ್ಯೂ ಟೀಮ್ ಕಾರ್ಯಕರ್ತರ ಮೀಲಾದ್ ರ‍್ಯಾಲಿ ರವಿವಾರ ಮಧ್ಯಾಹ್ನ 2 ಗಂಟೆಗೆ ನಡೆಲಿದ್ದು, ರ‍್ಯಾಲಿಯು ಪಾಣೆಮಂಗಳೂರು ಬಸ್ ಸ್ಟಾಂಡ್ ಬಳಿಯಿಂದ ಆರಂಭಗೊಂಡು, ಮೆಲ್ಕಾರ್ ನಲ್ಲಿ ಕೊನೆಗೊಳ್ಳಲಿದೆ.

ನವೆಂಬರ್ 7ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯುವ ಹುಬ್ಬುರ್ರಸೂಲ್ ಕಾನ್ಫರೆನ್ಸ್ ಪಬ್ಲಿಸಿಟಿ ಕನ್ವೆನ್ಷನ್ ಕೂಡಾ ನಾಳೆ ಸಂಜೆ 3:30 ಗಂಟೆಗೆ ಮೆಲ್ಕಾರ್ ಜಂಕ್ಷನ್'ನಲ್ಲಿ ನಡೆಯಲಿದೆ. ಸಿರಾಜುದ್ದೀನ್ ಸಖಾಫಿ ಕನ್ಯಾನ ಹುಬ್ಬುರ್ರಸೂಲ್ ಪ್ರಭಾಷಣ ನಡೆಸಲಿದ್ದಾರೆ. ಎಸ್ಸೆಸ್ಸೆಫ್ ಜಿಲ್ಲಾ ಅಧ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಳ, ಬಂಟ್ವಾಳ ಡಿವಿಷನ್ ಅಧ್ಯಕ್ಷ ಅಕ್ಬರ್ ಅಲಿ ಮದನಿ, ಕ್ಯೂ ಟೀಂ ಕನ್ವೀನರ್ ಸಿದ್ದೀಕ್ ಸಅದಿ ಮತ್ತು ಡಿವಿಷನ್ ನಾಯಕರು ಪಾಲ್ಗೊಳ್ಲಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News