ಪೆಟ್ರೋಲ್ ಸುರಿದು ಮಹಿಳಾ ತಹಶೀಲ್ದಾರರನ್ನು ಜೀವಂತ ದಹಿಸಿದ ದುಷ್ಕರ್ಮಿ

Update: 2019-11-04 15:13 GMT

ಹೈದರಾಬಾದ್, ಅ. 4: ಮಾತನಾಡುವ ನೆಪದಲ್ಲಿ ತಾಲೂಕು ಕಚೇರಿಯ ತಹಶೀಲ್ದಾರರ ಕೊಠಡಿ ಪ್ರವೇಶಿಸಿದ ಅಪರಿಚಿತ ವ್ಯಕ್ತಿಯೋರ್ವ ತಹಶೀಲ್ದಾರರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಜೀವಂತ ದಹಿಸಿದ ಘಟನೆ ತೆಲಂಗಾಣದ ಹೈದರಾಬಾದ್ ಸಮೀಪದ ಅಬ್ದುಲ್ಲಾಪೂರಮಟ್‌ನಲ್ಲಿ ಸೋಮವಾರ ಸಂಭವಿಸಿದೆ.

ತಹಶೀಲ್ದಾರ್ ವಿಜಯ ರೆಡ್ಡಿ ತನ್ನ ಕಚೇರಿಯಲ್ಲಿ ಕಾರ್ಯ ನಿರತರಾಗಿದ್ದಾಗ ಅಪರಿಚಿತ ವ್ಯಕ್ತಿಯೋರ್ವ ಒಳ ನುಗ್ಗಿದ ಹಾಗೂ ಸ್ವಲ್ಪ ಹೊತ್ತು ಅವರೊಂದಿಗೆ ಮಾತನಾಡಿದ. ಅನಂತರ ಬಾಟಲಿಯಲ್ಲಿ ತಂದಿದ್ದ ಪೆಟ್ರೋಲ್ ಅನ್ನು ಅವರ ಮೇಲೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲವು ಸೆಕೆಂಡುಗಳಲ್ಲಿ ವಿಜಯ ರೆಡ್ಡಿಯವರಿಗೆ ಬೆಂಕಿ ಹತ್ತಿಕೊಂಡು ವ್ಯಾಪಿಸಿತು. ಅವರು ಕೊಠಡಿಯಿಂದ ಹೊರ ಬರಲು ಯತ್ನಿಸಿದರು. ಆದರೆ, ಅರ್ಧಕ್ಕೆ ತಲುಪುವಾಗಲೇ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟರು. ಆರೋಪಿಯ ಗುರುತನ್ನು ಇದುವರೆಗೆ ಪತ್ತೆ ಹಚ್ಚಿಲ್ಲ. ಆತ ಕಚೇರಿಗೆ ಬರುವಾಗ ಎಲ್ಲರೂ ಮಧ್ಯಾಹ್ನದ ಊಟಕ್ಕೆ ತೆರಳಿದ್ದರು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News