ಬಂಬ್ರಾಣ ಉಸ್ತಾದ್‌ಗೆ ಸನ್ಮಾನ

Update: 2019-11-07 15:14 GMT

ವಿಟ್ಲ, ನ. 7: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರೀಯ ಮುಶಾವರ ಸಮಿತಿ ಸದಸ್ಯರಾಗಿ ನಿಯುಕ್ತರಾದ ಸಮಸ್ತ ಕರ್ನಾಟಕ ಮುಶಾವರ ಪ್ರಧಾನ ಕಾರ್ಯದರ್ಶಿಯೂ, ಕುಂಬ್ರ ಕೆಐಸಿ ವಿದ್ಯಾಸಂಸ್ಥೆಯ ಪ್ರಾಂಶುಪಾಲ, ಕೂರ್ನಡ್ಕ ಜುಮಾ ಮಸೀದಿಯ ಮುರ‍್ರಿಸರೂ ಆದ ಬಂಬ್ರಾಣ ಉಸ್ತಾದ್ ಅಬ್ದುಲ್ ಖಾದರ್ ಅಲ್ ಖಾಸಿಮಿ ಅವರನ್ನು ಅವರ ಹುಟ್ಟೂರು ವಿಟ್ಲದ ಮುಸ್ಲಿಂ ಬಾಂಧವರು ಗುರುವಾರ ಕೂರ್ನಡ್ಕ ಮಸೀದಿಗೆ ಭೇಟಿ ಸನ್ಮಾನಿಸಿದರು.

ಕುಂಬಳೆ ಸಮೀಪದ ಬಂಬ್ರಾಣ ಜುಮಾ ಮಸೀದಿಯಲ್ಲಿ ಸುದೀರ್ಘ 23 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅಬ್ದುಲ್ ಖಾದರ್ ಅಲ್ ಖಾಸಿಮಿ ಅವರು ಒಟ್ಟು 30 ವರ್ಷಗಳ ಮುರ‍್ರಿಸ್ ಸೇವೆಯಲ್ಲಿ ಸಾವಿರಾರು ಶಿಷ್ಯಂದಿರನ್ನು ಸಂಪಾದಿಸಿದ್ದಾರೆ.

ವಿಟ್ಲ ಟೌನ್ ಮಸೀದಿಯ ಉಪಾಧ್ಯಕ್ಷ ಆರ್.ಕೆ. ಅಬ್ದುಲ್ಲ ಹಾಜಿ, ಅಬೂಬಕರ್ ನೋಟರಿ ವಿಟ್ಲ, ದ.ಕ.ಜಿಲ್ಲಾ ವಕ್ಫ್ ಸಮಿತಿ ಸದಸ್ಯ ರಶೀದ್ ವಿಟ್ಲ, ಟೋಪ್ಕೋ ಜ್ಯುವೆಲ್ಲರಿ ಮಾಲಕ ಟಿ.ಕೆ. ಮುಹಮ್ಮದ್, ಉದ್ಯಮಿ ಹನೀಫ್ ಕುದ್ದುಪದವು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News