ಕರುಣಾಕರ್ ಪೈ ನಿಧನ

Update: 2019-11-07 17:18 GMT

ಪುತ್ತೂರು :  ಹಿರಿಯ ಉದ್ಯಮಿ, ಪುತ್ತೂರಿನ ರವಿ ಸೌಂಡ್ಸ್ ಮತ್ತು ಲೈಟಿಂಗ್ ಸಂಸ್ಥೆಯ ಮಾಲಕರಾಗಿದ್ದ ಕರುಣಾಕರ ಪೈ ಬುಧವಾರ ಬೆಂಗಳೂರಿನಲ್ಲಿ ನಿಧನರಾದರು.

ಪುತ್ತೂರಿನ ಕಲ್ಲಾರೆಯಲ್ಲಿ ರವಿ ಸೌಂಡ್ಸ್ ಮತ್ತು ಲೈಟಿಂಗ್ ಸಂಸ್ಥೆಯನ್ನು ಹಲವಾರು ವರ್ಷಗಳ ಕಾಲ ನಡೆಸಿದ್ದ ಕರುಣಾಕರ ಪೈ ಅವರು ಸೌಂಡ್ಸ್ ಮತ್ತು ಲೈಟಿಂಗ್ ವ್ಯವಸ್ಥೆಯ ಮೂಲಕ ಪುತ್ತೂರು ಭಾಗದಲ್ಲಿ ಮನೆಮಾತಾಗಿದ್ದರು. ಪುತ್ತೂರಿನ ಹಲವು ಕಡೆಗಳಲ್ಲಿ ಪ್ರಸ್ತುತ ನಡೆಯುತ್ತಿರುವ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಗಳನ್ನು ಆರಂಭಿಸುವಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ್ದರು.

ಪುತ್ತೂರು ನಗರದ ಹೊರವಲಯದ ಕೆಮ್ಮಿಂಜೆ ಗ್ರಾಮದ ಕಾಡುಮನೆ ನಿವಾಸಿಯಾಗಿದ್ದ ಕರುಣಾಕರ ಪೈ ಅವರು ಆರೆಸ್ಸೆಸ್ ಸಂಘಟನೆಯಲ್ಲಿ ಸಕ್ರೀಯರಾಗಿದ್ದರು. ಬಿಜೆಪಿ ನಗರ ಘಟಕದ ಉಪಾಧ್ಯಕ್ಷರಾಗಿ ಅವರು ಈ ಹಿಂದೆ ಪಕ್ಷ ಸಂಘಟನೆ ಮಾಡಿದ್ದರು. ಪುತ್ತೂರು ವರ್ತಕ ಸಂಘದ ಪದಾಧಿಕಾರಿಯಾಗಿಯೂ ಅವರು ಗುರುತಿಸಿಕೊಂಡಿದ್ದರು. ಸೌಂಡ್ಸ್ ಮತ್ತು ಲೈಟಿಂಗ್ ವ್ಯವಸ್ಥೆ ವ್ಯವಹಾರದಿಂದ ದೂರ ಉಳಿದ ಬಳಿಕ ಅವರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ತನ್ನ ಪುತ್ರ ಕಾರ್ತಿಕ್ ಅವರ ಜತೆ ಬೆಂಗಳೂರಿನಲ್ಲಿ ಪತ್ನಿಯೊಂದಿಗೆ ನೆಲೆಸಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News