ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದ ಅಯೋಧ್ಯೆ ಪ್ರಕರಣದ ಕಕ್ಷಿಗಾರ ಇಕ್ಬಾಲ್ ಅನ್ಸಾರಿ
Update: 2019-11-09 08:37 GMT
ಅಯೋಧ್ಯೆ, ನ.9: ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ತೀರ್ಪಿನಿಂದ ತಾನು ತೃಪ್ತನಾಗಿದ್ದೇನೆ ಎಂದು ಬಾಬರಿ ಮಸೀದಿ-ರಾಮ ಜನ್ಮಭೂಮಿ ವಿವಾದದ ಕಕ್ಷಿಗಾರ ಹಾಶಿಮ್ ಅನ್ಸಾರಿಯವರ ಪುತ್ರ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.
"ತೀರ್ಪು ಹೊರಬೀಳುವುದಕ್ಕೂ ಮೊದಲು ಕೋರ್ಟ್ ಯಾವ ನಿರ್ಧಾರ ಪ್ರಕಟಿಸುತ್ತದೋ ಅದಕ್ಕೆ ಬದ್ಧವಾಗಿರುತ್ತೇವೆ ಎಂದು ನಾವು ಹೇಳಿದ್ದೆವು. ಈಗ ನಾವು ತೀರ್ಪನ್ನು ಸ್ವಾಗತಿಸುತ್ತೇವೆ. ಈಗ ಎಲ್ಲಿ ಮತ್ತು ಯಾವಾಗ ಮಸೀದಿಗಾಗಿ ಜಮೀನು ನೀಡಬೇಕೆಂದು ನಿರ್ಧರಿಸಬೇಕಾದದ್ದು ಸರಕಾರ. ಸರಕಾರ ಏನು ನಿರ್ಧರಿಸುತ್ತದೋ ಅದನ್ನು ಸ್ವೀಕರಿಸುತ್ತೇವೆ" ಎಂದವರು ಹೇಳಿದರು.