ಉದ್ಯಾವರ ಸಾವಿರ ಜಮಾಅತ್ ವತಿಯಿಂದ ಸಂಭ್ರಮದ ಮೀಲಾದುನ್ನಬಿ ಆಚರಣೆ

Update: 2019-11-10 06:43 GMT

ಮಂಜೇಶ್ವರ, ನ.10: ಪ್ರವಾದಿ ಮುಹಮ್ಮದ್ (ಸ.) ಅವರ ಜನ್ಮ ದಿನವನ್ನು ಉದ್ಯಾವರ ಸಾವಿರ ಜಮಾಅತ್ ಖಿದ್ಮತುಲ್ ಇಸ್ಲಾಮ್ ಕಮಿಟಿಯ ವತಿಯಿಂದ ರವಿವಾರ ಸಂಭ್ರಮದಿಂದ ಆಚರಿಸಲಾಯಿತು.

ಜಮಾಅತ್ ವ್ಯಾಪ್ತಿಯಲ್ಲಿರುವ ಹದಿಮೂರು ಮೊಹಲ್ಲಾಗಳ ಸುತ್ತಮುತ್ತಲಿನ ಪ್ರದೇಶವನ್ನು ಅಲಂಕರಿಸಲಾಗಿದ್ದು,‌ ಉದ್ಯಾವರ ಸಾವಿರ ಜಮಾಅತ್ ಆವರಣದಲ್ಲಿ ಎಲ್ಲಾ ಮೊಹಲ್ಲಾದ ಮಕ್ಕಳಿಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಹಿತ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಹದಿಮೂರು ಮೊಹಲ್ಲಾಗಳ ವಿದ್ಯಾರ್ಥಿಗಳು, ಅಧ್ಯಾಪಕರುಗಳು ಹಾಗು ಪೋಷಕರು  ಕಾಲ್ನಡಿಗೆಯೊಂದಿಗೆ ಮೀಲಾದ್ ಮೆರವಣಿಗೆ ನಡೆಸಿದರು.

 ಎಲ್ಲಾ ಮೊಹಲ್ಲಾಗಳ ವಿದ್ಯಾರ್ಥಿಗಳು ಉದ್ಯಾವರ ಜಮಾಅತ್ ಆವರಣದಲ್ಲಿ ಬೆಳಗ್ಗೆಯೇ ಜಮಾಯಿಸಿ ಮಂಜೇಶ್ವರ, ಉದ್ಯಾವರ , ರಾ. ಹೆದ್ದಾರಿಗಳಲ್ಲಿ ಸಾಗಿ ಕುಂಜತ್ತೂರು ತನಕ ಮೀಲಾದ್  ಮೆರವಣಿಗೆ ನಡೆಸಿದರು.

ಜಮಾಅತ್ ಅಧ್ಯಕ್ಷ ಸೂಫಿ ಹಾಜಿ, ಕಾರ್ಯದರ್ಶಿ ಮೊಯ್ದಿನ್ ಹಾಜಿ, ಭಾವ ಹಾಜಿ, ಅಬೂಬಕರ್ ಮಾಹಿನ್ ಹಾಜಿ, ಇಬ್ರಾಹೀಂ ಬಟರ್ ಫ್ಲೈ, ಮದ್ರಸಗಳ ಮುಅಲ್ಲಿಮರು, ಮಸೀದಿ, ಮದ್ರಸಗಳ‌ ಆಡಳಿತ ಕಮಿಟಿಯ ಪದಾಧಿಕಾರಿಗಳು  ಮೀಲಾದ್ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News