ಮೀಲಾದ್ ಶುಭಾಶಯ ಕೋರಿದ ಪ್ರಧಾನಿ ಮೋದಿ ಹೇಳಿದ್ದು ಹೀಗೆ...

Update: 2019-11-10 10:15 GMT

ಹೊಸದಿಲ್ಲಿ, ನ.10: ಮುಹಮ್ಮದ್ ಪೈಂಗಬರ್ ಅವರ ಜನ್ಮ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ' ಮೀಲಾದ್ ಶುಭಾಶಯ ಕೋರಿದ್ದು, ಎಲ್ಲೆಡೆ ಶಾಂತಿ ನೆಲೆಸಲಿ ಎಂದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, "ಮೀಲಾದುನ್ನಬಿಯ ಶುಭಾಶಯಗಳು. ಪ್ರವಾದಿ ಮುಹಮ್ಮದರ ಸಂದೇಶಗಳಿಂದ ಪ್ರೇರಿತರಾಗಿ ಸಮಾಜದಲ್ಲಿ ಸಾಮರಸ್ಯ ಮತ್ತು ಸಹಾನುಭೂತಿ ವೃದ್ಧಿಸಲಿ. ಎಲ್ಲಾ ಕಡೆಯೂ ಶಾಂತಿ ನೆಲೆಸಲಿ" ಎಂದಿದ್ದಾರೆ.

"ಪ್ರವಾದಿ ಮುಹಮ್ಮರ ಜನ್ಮದಿನವಾದ ಇಂದು ಎಲ್ಲಾ ನಾಗರಿಕರಿಗೂ, ಮುಖ್ಯವಾಗಿ ನಮ್ಮ ಮುಸ್ಲಿಮ್ ಸಹೋದರರು ಮತ್ತು ಸಹೋದರಿಯರಿಗೆ ಶುಭಾಶಯಗಳು. ಪ್ರವಾದಿಯವರ ವಿಶ್ವ ಸಹೋದರತ್ವ ಮತ್ತು ಸಹಾನುಭೂತಿಯ ಸಂದೇಶಗಳು ಎಲ್ಲರ ಯೋಗಕ್ಷೇಮಕ್ಕಾಗಿ ಕೆಲಸ ಮಾಡುವಂತೆ ನಮ್ಮನ್ನು ಪ್ರೇರೇಪಿಸುತ್ತದೆ" ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News