ಕಾರ್ಕಳ : ಜಮೀಯ್ಯತುಲ್ ಫಲಾಹ್ ಘಟಕದಿಂದ ವಿದ್ಯಾರ್ಥಿ ವೇತನ, ಸಾಧಕರಿಗೆ ಸನ್ಮಾನ

Update: 2019-11-11 09:43 GMT

ಕಾರ್ಕಳ : ಜಮೀಯ್ಯತುಲ್ ಫಲಾಹ್ ಘಟಕದಿಂದ 50 ಮಂದಿ ವಿದ್ಯಾರ್ಥಿಗಳಿಗೆ ಹಾಗೂ ಇಬ್ಬರು ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಕಾರ್ಕಳ ವೆಲ್ಫೇರ್ ಸಭಾಭವನದಲ್ಲಿ ನಡೆಯಿತು.

ದ್ವಿತೀಯ ಪಿಯುಸಿಯಲ್ಲಿ ಗರಿಷ್ಠ ಅಂಕ ಗಳಿಸಿರುವ ಗೌಸಿಯಾ ಬಾನು ಹಾಗೂ ಅಂತರ್ ರಾಷ್ಟ್ರೀಯ ಜೆಸಿಐ ಸಂಸ್ಥೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಮದ್ ಖಾನ್ ಅವರಿಗೆ ಜಮೀಯ್ಯತುಲ್ ಫಲಾಹ್ ಘಟಕದಿಂದ ಸನ್ಮಾನಿಸಲಾಯಿತು.

ಈ ಸಂದರ್ಭ ಮುಖ್ಯ ಅತಿಥಿಯಾಗಿ ಮಾತನಾಡಿದ ಕಾರ್ಕಳ ಮುಸ್ಲಿಂ ಜಮಾಅತ್ ಅಧ್ಯಕ್ಷ ಅಸ್ಫಕ್ ಅಹಮದ್ ವಿದ್ಯಾರ್ಥಿವೇತನವನ್ನು ಪಡೆದ ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆಯನ್ನು ಪಡೆದು ಮುಂದೆ ಇದೇ ರೀತಿ ಬಡಮಕ್ಕಳಿಗೆ ನೀವು ಧನಸಹಾಯ ಮಾಡಬೇಕೆಂದು ಹೇಳಿದರು.

ಸಮಾರಂಭದಲ್ಲಿ ಘಟಕದ ಅಧ್ಯಕ್ಷ ಯಾಕೂಬ್ ಸಾಹೇಬ್, ಕಾರ್ಯದರ್ಶಿ ಸೈಯದ್ ಹಸನ್, ಕಾರ್ಕಳ ಮುಸ್ಲಿಂ ಒಕ್ಕೂಟದ ತಾಲೂಕ್ ಅಧ್ಯಕ್ಷ ಮಹಮ್ಮದ್ ಗೌಸ್, ಅಝೀಝುದ್ದಿನ್,  ಹಾಜಿ ಸೈಯದ್ ಅಬ್ಬಾಸ್, ಅಬ್ದುಲ್ ರಶೀದ್, ಸುಲೈಮಾನ್ ಬಜೆಗೊಳಿ ಹಾಗೂ ಅಮೀರ್ ಉಪಸ್ಥಿತರಿದ್ದರು. ಉಪಾಧ್ಯಕ್ಷ ನಾಸಿರ್ ಶೇಕ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News