ಮುಡಿಪು: ರಕ್ತದಾನದೊಂದಿಗೆ ಸಂಭ್ರಮದ ಮಿಲಾದುನ್ನಬಿ ಆಚರಣೆ

Update: 2019-11-11 12:30 GMT

ಮಂಗಳೂರು, ನ.11: ಪ್ರವಾದಿ ಮುಹಮ್ಮದ್ (ಸ.ಅ) ಅವರ 1494 ನೇ ಜನ್ಮ ದಿನಾಚರಣೆಯ ಅಂಗವಾಗಿ ಮಾದುಮೂಲೆ ಫೌಂಡೇಶನ್ ಮುಡಿಪು, ಯೂತ್ ವೆಲ್ಫೇರ್ ಅಸೋಸಿಯೇಶನ್ ಮುಡಿಪು ಮತ್ತು ಸೈಫುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಶನ್ ಇರಾ ಇದರ ಸಂಯುಕ್ತ ಆಶ್ರಯದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಹಭಾಗಿತ್ವದೊಂದಿಗೆ ಯೇನೆಪೋಯ ಬ್ಲಡ್ ಬ್ಯಾಂಕ್ ದೇರಳರಟ್ಟೆ ಇದರ ಸಹಕಾರದೊಂದಿಗೆ ರಕ್ತದಾನ ಶಿಬಿರವು ಮುಡಿಪು ಜಂಕ್ಷನ್ ಇಲ್ಲಿ ನಡೆಯಿತು.

ಸಭಾ ಕಾರ್ಯಕ್ರಮವನ್ನು ಮುಡಿಪು ಗೌಸಿಯ ಜುಮಾ ಮಸೀದಿಯ ಖತೀಬ್ ಆಸಿಫ್ ಅಝ್ಹರಿ ದುವಾದ ಮೂಲಕ ಉದ್ಘಾಟಿಸಿದರು. ವೇದಿಕೆಯಲ್ಲಿ ಬ್ರೈಟ್ ಸಮೂಹ ಶಿಕ್ಷಣ ಸಂಸ್ಥೆ ಮುಡಿಪು ಇದರ ಅಬ್ದುಲ್ ಜಲೀಲ್, ತಾಲೂಕು ಪಂಚಾಯತ್ ಸದಸ್ಯರಾದ ಹೈದರ್ ಕೈರಂಗಳ, ಬಾಳೆಪುಣಿ ಪಂಚಾಯತ್ ಸದಸ್ಯರುಗಳಾದ ಬಶೀರ್ ಹಾಗೂ ಸಿದ್ದೀಕ್ ಕೆ.ಎಚ್, ಸಾಮಾಜಿಕ ಕಾರ್ಯಕರ್ತರಾದ ಅಬ್ದುಲ್ ರಹಿಮಾನ್ ತೋಟಾಲ್, ಮಾದುಮೂಲೆ ಟ್ರಸ್ಟ್ ಇದರ ಅಧ್ಯಕ್ಷ ಫಯಾಝ್ ಮುಡಿಪು, ಮುಡಿಪು ಯೂತ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷರಾದ ಶಾಫಿ, ಸೈಫುಲ್ ಹುದಾ ಯಂಗ್ ಮೆನ್ಸ್ ಇದರ ಅಧ್ಯಕ್ಷ ಲತೀಫ್, ಎಸ್.ಕೆ ಹಾಲ್ ಮುಡಿಪು ಇದರ ಮಾಲಕ ಖಾದರ್ ಹಾಜಿ, ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ ಅಧ್ಯಕ್ಷ ಸಿದ್ದೀಕ್ ಮಂಜೇಶ್ವರ, ಖ್ಯಾತ ಲೇಖಕ ಇಸ್ಮತ್ ಪಜೀರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸನ್ಮಾನ: ಕಾರ್ಯಕ್ರಮದಲ್ಲಿ ರಕ್ತದಾನಕ್ಕೆ ವಿಶೇಷ ಮಹತ್ವ ನೀಡಿ, ಪ್ರತಿಯೊಬ್ಬರನ್ನು ರಕ್ತದಾನಕ್ಕಾಗಿ ಪ್ರೇರೇಪಿಸುವ, ವೃತ್ತಿಯಲ್ಲಿ ಆಂಬ್ಯುಲೆನ್ಸ್ ಚಾಲಕರಾಗಿರುವ ಸಮಾಜ ಸೇವಕ, ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯ ಕಾರ್ಯ ನಿರ್ವಾಹಕ ಅದ್ನಾನ್ ಕುಂಜತ್ತೂರು ಅವರನ್ನು ಸನ್ಮಾನಿಸಲಾಯಿತು.

ಶಿಬಿರದಲ್ಲಿ ಒಟ್ಟು 65 ಮಂದಿ ರಕ್ತದಾನ ಮಾಡಿದರು. ಸಂಸ್ಥೆಯ 216ನೇ ರಕ್ತದಾನ ಶಿಬಿರದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯ ಕಾರ್ಯದರ್ಶಿ ನವಾಝ್ ಕಲ್ಲರಕೋಡಿ, ಕಾರ್ಯ ನಿರ್ವಾಹಕರುಗಳಾದ ಮುನೀರ್ ಚೆಂಬುಗುಡ್ಡೆ, ಫಯಾಝ್ ಮಾಡೂರು, ಸಲಾಂ ಚೆಂಬುಗುಡ್ಡೆ, ಫಾರೂಕ್ ಜ್ಯೂಸ್ ರೊಮ್ಯಾಂಟಿಕ್, ಇಮ್ರಾನ್ ಉಪ್ಪಿನಂಗಡಿ, ಫಾರೂಕ್ ಬಿಗ್ ಗ್ಯಾರೇಜ್, ಹಮೀದ್ ಪಜೀರ್, ಹಫೀಝ್ ಕೆ.ಸಿ ರೋಡ್, ಹನೀಫ್ ಮುಡಿಪು ಉಪಸ್ಥಿತರಿದ್ದರು.

ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ ಕಾರ್ಯ ನಿರ್ವಾಹಕ ಸಿರಾಜ್ ಪಜೀರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News