ಮುಡಿಪು: ಮಜ್ಲಿಸ್ ಎಜು ಪಾರ್ಕ್ ವತಿಯಿಂದ ಗ್ರಾಂಡ್ ಹುಬ್ಬುರಸೂಲ್ ಕಾನ್ಫರೆನ್ಸ್

Update: 2019-11-12 07:11 GMT

ಮುಡಿಪು, ನ.12: ಇಲ್ಲಿನ ಮಜ್ಲಿಸ್ ಎಜು ಪಾರ್ಕ್ ವತಿಯಿಂದ ಗ್ರಾಂಡ್ ಹುಬ್ಬುರಸೂಲ್ ಕಾನ್ಫರೆನ್ಸ್ ಮುಡಿಪುವಿನ ಎಜುಪಾರ್ಕಿನಲ್ಲಿ ಶುಕ್ರವಾರ ನಡೆಯಿತು.

ಸಯ್ಯದ್ ಜಲಾಲುದ್ದೀನ್  ಜಮಾಲುಲ್ಲೈಲಿ ಪಾತೂರು ಹಾಗೂ ಸಯ್ಯದ್ ಮುಸ್ತಫ ತಂಙಳ್ ಅಲ್ ಮುಸೈಖಿ ದುಆ ನೆರವೇರಿಸಿದರು.

ಉಡುಪಿ ಖಾಝಿ ಬೇಕಲ್ ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಿದರು. ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಮುಖ್ಯ ಭಾಷಣ ಮಾಡಿದರು.

ಮುಡಿಪು ಎಜು ಪಾರ್ಕ್ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಅಶ್ರಫ್ ತಂಙಳ್ ಸಖಾಫ್ ಅಲ್ ಮದನಿ ಮಾಸಿಕ ಸಖಾಫಿಯ್ಯ ರಾತೀಬ್ ಗೆ ನೇತೃತ್ವ ವಹಿಸಿದ್ದರು.

ಕಾರ್ಯಕ್ರಮದ ಮೊದಲು ಮೀಲಾದ್ ರ್ಯಾಲಿ ನಡೆಯಿತು. ರ್ಯಾಲಿಯುದ್ದುಕ್ಕೂ ಆಕರ್ಷಕ ಪಥಸಂಚಲನ, ದಫ್, ಸ್ವಲಾತ್ ಬುರ್ದಾ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News