ಉಡುಪಿ : ದುಷ್ಕರ್ಮಿಗಳ ತಂಡದಿಂದ ಇಬ್ಬರಿಗೆ ಹಲ್ಲೆ, ಆಂಜನೇಯ ಭಾವಚಿತ್ರ ವಿರೂಪಕ್ಕೆ ಯತ್ನ

Update: 2019-11-15 03:48 GMT

ಉಡುಪಿ: ದೊಡ್ಡಣಗುಡ್ಡೆಯಲ್ಲಿ ದುಷ್ಕರ್ಮಿಗಳ ತಂಡವೊಂದು ಇಬ್ಬರಿಗೆ ಥಳಿಸಿ, ಆಂಜನೇಯನ ಭಾವಚಿತ್ರವನ್ನು ವಿರೂಪ ಮಾಡಲು ಯತ್ನಿಸಿದ ಘಟನೆ ದೊಡ್ಡಣಗುಡ್ಡೆಯ ಜಲಜಾಕ್ಷಿ ಶೆಡ್ತಿ ರಂಗಮಂದಿರದಲ್ಲಿ ನಡೆದಿದೆ.

ಗುರುವಾರವಾದ ಹಿನ್ನೆಲೆಯಲ್ಲಿ ಇಲ್ಲಿ ಪೂಜೆ ನಡೆದಿತ್ತು. ಕತ್ತಲಾಗುತ್ತಿದ್ದಂತೆ ಏಳೆಂಟು ಮಂದಿಯಿದ್ದ ದುಷ್ಕರ್ಮಿಗಳ ತಂಡ ಬಂದು ಇಬ್ಬರಿಗೆ ಥಳಿಸಿ, ಆಂಜನೇಯನ ಭಾವಚಿತ್ರಕ್ಕೆ ಟೋಪಿ ಹಾಕಿ ಸೆಲ್ಫಿ ತೆಗೆದು ಪರಾರಿಯಾಗಿದೆ ಎಂದು ತಿಳಿದುಬಂದಿದೆ.

ದುಷ್ಕರ್ಮಿಗಳ ತಂಡ ದುಷ್ಕೃತ್ಯ ಎಸಗಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಸ್ಥಳೀಯರು ಜಮಾಯಿಸಿದ್ದಾರೆ. ಪ್ರಕರಣದ ಸೂಕ್ಷ್ಮತೆ ಅರಿತ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಎಸ್ಪಿ ನಿಶಾ ಜೇಮ್ಸ್ ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದು ಸೂಕ್ತ ಬಂದೋಬಸ್ತ್ ಗೆ ನಿರ್ದೇಶನ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News