ಮೀನುಗಾರನ ಮೃತದೇಹ ಪತ್ತೆ
Update: 2019-11-16 16:01 GMT
ಗಂಗೊಳ್ಳಿ, ನ.16: ಗಂಗೊಳ್ಳಿ ಬಂದರಿನಲ್ಲಿ ನ.14ರಂದು ರಾತ್ರಿ ಬೋಟಿನಲ್ಲಿ ಬಲೆ ಸ್ವಚ್ಛಗೊಳಿಸುತ್ತಿದ್ದ ವೇಳೆ ಆಯ ತಪ್ಪಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದ ಒರಿಸ್ಸಾ ರಾಜ್ಯದ ಮೀನುಗಾರ ಖಾಗೇಶ್ವರ ಮಾಜಿ(29) ಎಂಬವರ ಮೃತ ದೇಹವು ಇಂದು ಬೆಳಗ್ಗೆ 7ಗಂಟೆ ಸುಮಾರಿಗೆ ಗಂಗೊಳ್ಳಿಯ ದಾಖುಹಿತ್ಲು ಎಂಬಲ್ಲಿ ಪಂಚಗಂಗಾವಳಿ ಹೊಳೆಯಲ್ಲಿ ಪತ್ತೆಯಾಗಿದೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.