ನದಿಯಲ್ಲಿ ಮುಳುಗಿ ಮೃತ್ಯು

Update: 2019-11-16 16:02 GMT

ಗಂಗೊಳ್ಳಿ, ನ.16: ಹಡವು ಗ್ರಾಮದ ಸೌಪರ್ಣಿಕ ನದಿಯಲ್ಲಿ ಸ್ನಾನ ಮಾಡು ತ್ತಿದ್ದ ವ್ಯಕ್ತಿಯೊಬ್ಬರು ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಬಗ್ಗೆ ವರದಿ ಯಾಗಿದೆ.

ಮೃತರನ್ನು ಹಡವು ಗ್ರಾಮದ ಅಶೋಕ ಪೂಜಾರಿ(45) ಎಂದು ಗುರುತಿಸ ಲಾಗಿದೆ. ಇವರು ಮನೆಯ ಗದ್ದೆ ಕೊಯ್ಲು ಕೃಷಿ ಕೆಲಸವನ್ನು ಮುಗಿಸಿ, ನ.15ರಂದು ಸಂಜೆ ವೇಳೆ ಸ್ನಾನ ಮಾಡಲು ಸಮೀಪದ ಸೌಪರ್ಣಿಕ ನದಿಗೆ ಇಳಿದಿದ್ದರು. ಈ ವೇಳೆ ಅವರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ನಾಪತ್ತೆ ಯಾಗಿದ್ದರೆನ್ನಲಾಗಿದೆ.

ಈ ಬಗ್ಗೆ ಹುಡುಕಾಟ ನಡೆಸುತ್ತಿರುವ ನ.16ರಂದು ಬೆಳಗ್ಗೆ 7.30ರ ಸುಮಾರಿಗೆ ಅಶೋಕ್ ಪೂಜಾರಿ ಅವರ ಮೃತದೇಹವು ಹಡವು ಗ್ರಾಮದ ಸೌಪರ್ಣಿಕ ನದಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News