ಬಿ.ಸಿ.ರೋಡ್ : ಕಂಟನೈರ್ ಲಾರಿ ಢಿಕ್ಕಿ ; ಬೈಕ್ ಸವಾರ ಗಂಭೀರ

Update: 2019-11-19 06:53 GMT

ಬಂಟ್ವಾಳ, ನ. 19: ಕಂಟನೈರ್ ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ  ಮಂಗಳೂರು- ಬೆಂಗಳೂರು ರಾಷ್ಟೀಯ ಹೆದ್ದಾರಿಯ ಬಿ.ಸಿ.ರೋಡ್ ನಲ್ಲಿ ಇದೀಗ ನಡೆದಿದೆ.

ಬಂಟ್ವಾಳ ಕೆಳಗಿನ ಪೇಟೆಯ ನಿವಾಸಿ, ದಿ. ಪದ್ಮನಾಭ ಎಂಬವರ ಪುತ್ರ ಸೂರ್ಯಕಾಂತ್ (38) ಗಂಭೀರ ಗಾಯಗೊಂಡ ಬೈಕ್ ಸವಾರ ಎಂದು ಗುರುತಿಸಲಾಗಿದೆ.

ಸೂರ್ಯಕಾಂತ್ ಅವರು ಕೆಲಸದ ನಿಮಿತ್ತ ಮೆಲ್ಕಾರ್ ನಿಂದ ಬಿ.ಸಿ.ರೋಡ್ ತೆರಳುತ್ತಿರುವಾಗ ಬಿ.ಸಿ.ರೋಡ್ ಮೆಲ್ಸೇತುವೆಯ ಅಪಾಯಕಾರಿ ತಿರುವಿನಲ್ಲಿ ಕಂಟೈನರ್ ಲಾರಿ ಢಿಕ್ಕಿಯಾಗಿದೆ. ಘಟನೆಯಿಂದ ಸೂರ್ಯಕಾಂತ್ ಅವರ ತಲೆಗೆ ಗಂಭೀರವಾದ ಗಾಯಗಳಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News